ಸಿ.ಟಿ.ರವಿ ಉರಿಗೌಡ, ಅಶ್ವತ್ಥನಾರಾಯಣ ನಂಜೇಗೌಡ: ಡಿ.ಕೆ. ಶಿವಕುಮಾರ್
ನಾಗಮಂಗಲ (ಮಂಡ್ಯ): ಬಿಜೆಪಿಗರು ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ. ನಾವು ಹೇಡಿಗಳಲ್ಲ, ಚುಂಚಶ್ರೀ ಗಳು ಹೋರಾಟದ ನೇತೃತ್ವ ವಹಿಸಲಿ ಇಲ್ಲದಿದ್ದರೆ ನಮ್ಮ ರಾಜಕೀಯ ಬದಿಗಿಟ್ಟು ಸಮುದಾಯದ ಪರ ಹೋರಾಟಕ್ಕೆ ನಾನೇ ಇಳಿಯುವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ನಾಗಮಂಗಲ ತಾಲೂಕು ಆದಿಚುಂ ಚನಗಿರಿ ಕ್ಷೇತ್ರದಲ್ಲಿ ಕುಟುಂಬ ಸದಸ್ಯರೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ ಉರಿಗೌಡ, ಅಶ್ವತ್ಥನಾರಾಯಣ ನಂಜೇಗೌಡರಾಗಿದ್ದಾರೆ. ಇದಕ್ಕೆ ಇನ್ನೊಬ್ಬ ಸಿನೆಮಾ ಮಾಡಲು ಹೊರಟಿದ್ದಾನೆ. ಬಿಜೆಪಿಗರ ಈ ನಡೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಒಕ್ಕಲಿಗ ಸಮುದಾಯಕ್ಕೆ ಕಳಂಕ ತರುತ್ತಿರುವ ಬಿಜೆಪಿಗರ ವಿರುದ್ಧ ನಿರ್ಮಲಾನಂದನಾಥ ಸ್ವಾಮೀಜಿಯವರು ಹೋರಾಟದ ನೇತೃತ್ವ ವಹಿಸಬೇಕು. ಯಾರನ್ನೋ ಕರೆದು ಬುದ್ಧಿ ಹೇಳಬಾರದು. ಇಲ್ಲದಿದ್ದರೆ ನಾವೇ ಹೋರಾಟ ಮಾಡುತ್ತೇವೆ. ಉರಿಗೌಡ ನಂಜೆಗೌಡ ಸಿನೆಮಾ ಮಾಡುವವರು 40 ಪರ್ಸೆಂಟ್ ಭ್ರಷ್ಟಾಚಾರದ ಸಿನೆಮಾ ಮಾಡಲಿ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ಚಿಕಿತ್ಸೆಗೆ ತಗಲುತ್ತಿದ್ದ ಅತಿಯಾದ ವೆಚ್ಚದಿಂದ ನೊಂದು ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆಗೈದ ಯುವಕ