ಸ್ನೇಹಿತರೊಂದಿಗೆ ಸ್ನಾನಕ್ಕೆ ತೆರಳಿದ ಯುವಕ ನೀರುಪಾಲು
ಚಾಮರಾಜನಗರ: ಸ್ನಾನ ಮಾಡಲು ಹೋದ ಯುವಕ ನೀರು ಪಾಲಾದ ಘಟನೆ ತಮಿಳುನಾಡಿನ ಮಾಸಲಿಪಾಳ್ಯಂ ಬಳಿ ನಡೆದಿದೆ. ಹನೂರು ತಾಲ್ಲೂಕಿನ ದಿಲೀಪ್ ಕುಮಾರ್ (20) ಮೃತ ಯುವಕ. ಮೆಟ್ಟೂರು ಡ್ಯಾಂ ನಲ್ಲಿ ಸ್ನಾನ ಮಾಡುವಾಗ ನೀರು ಪಾಲಾಗಿದ್ದಾನೆ.
ನೇಕಾರದೊಡ್ಡಿ ಯಲ್ಲಿನ ಹಬ್ಬಕ್ಕೆ ತೆರಳಿದ್ದ ದಿಲೀಪ್ ಕುಮಾರ್ ಸ್ನೇಹಿತರೊಂದಿಗೆ ಮೆಟ್ಟೂರು ಡ್ಯಾಂ ಗೆ ಸ್ನಾನಕ್ಕೆಂದು ತೆರಳಿದ ವೇಳೆ ಈ ದುರ್ಘಟನೆ ಸಂಭವಿಸಿದೆ.
Next Story