ಕಾಂಗ್ರೆಸ್ ಗ್ಯಾರೆಂಟಿಗಳ ಬಗ್ಗೆ ಟೀಕೆ: ಮಾಜಿ ಸಿಎಂ ಬೊಮ್ಮಾಯಿ ಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಬಿಜೆಪಿ ಸರ್ಕಾರದ ಭರವಸೆಗಳು ಹಾಗೂ ಅವುಗಳನ್ನು ಈಡೇರಿಸದಿರುವುದರ ಬಗ್ಗೆ ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ನೆನಪಿಸಿರುವ ಸಚಿವರಾದ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ ಸರ್ಕಾರ ಮೊದಲ ಸಂಪುಟ ಸಭೆಯಲ್ಲಿ ಐದು ಗ್ಯಾರೆಂಟಿಗಳನ್ನು ಈಡೇರಿಸಿಲ್ಲ ಎನ್ನುವ ಬೊಮ್ಮಾಯಿ ಟೀಕೆಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮೂರು ಪ್ರಮುಖ ವಿಚಾರಗಳನ್ನು ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಟ್ವೀಟ್ ಹೀಗಿದೆ...
ಮೂರು ಪ್ರಮುಖ ನೆನಪುಗಳನ್ನು ಬೊಮ್ಮಾಯಿ ಅವರ ಗಮನಕ್ಕೆ ತರಬಯಸುತ್ತೇನೆ.
1 ) ಚುನಾವಣೆ ಫಲಿತಾಂಶ ಪ್ರಕಟವಾಗಿರುವುದು ಮೇ 13 ರಂದು.
2) ಬಿಜೆಪಿ ಸರ್ಕಾರ 600 ಚುನಾವಣೆ ಪೂರ್ವ ಭರವಸೆ ನೀಡಿತ್ತು. ಅವುಗಳಲ್ಲಿ ಕೇವಲ 50 ಭರವಸೆಗಳನ್ನೂ ಕೂಡಾ ಈಡೇರಿಸಿಲ್ಲ.
3) ದೇಶದ ಜನರು ಸ್ಮಾರ್ಟ್ ಸಿಟಿ ಯೋಜನೆ, ಕಪ್ಪು ಹಣ ವಾಪಸ್, ಪ್ರತಿ ಅಕೌಂಟ್ ಗೆ 15 ಲಕ್ಷ ರೂಪಾಯಿ, ಉದ್ಯೋಗ, ಮೋದಿ ಅವರ ಭ್ರಷ್ಟಾಚಾರ ತಡೆಗೆ ಕ್ರಮದ ಬಗ್ಗೆ ಇನ್ನೂ ಕಾಯುತ್ತಿದ್ದಾರೆ ಎಂದು ಮೂರು ಪ್ರಮುಖ ನೆನಪುಗಳನ್ನು ಮಾಜಿ ಸಿಎಂ ಗಮನಕ್ಕೆ ತಂದರು.
3 reminders to the former CM :
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 22, 2023
1. Poll results were declared on May 13
2. BJP had over 600 promises in their manifesto & didn’t deliver even 50
3. People are still waiting for smart cities,black money, 15 lakhs in people’s account,jobs, curbing of corruption by Modi ji pic.twitter.com/nAkuanNFPt