ಅಕ್ಟೋಬರ್ನಲ್ಲಿ ಮಂಗಳೂರಿನಲ್ಲಿ ಕಾರ್ಯಾಗಾರ: ಪ್ರಕಾಶ್ ಕಮ್ಮರಡಿ
ರೈತರಿಗೆ ಬಹುಮೂಲ ಆದಾಯಕ್ಕಾಗಿ ಸಮಗ್ರ ಕೃಷಿಗೆ ಉತ್ತೇಜನ
ಮಂಗಳೂರು, ಸೆ.13: ಅಡಿಕೆ ಅಡಿಕೆ ಬೆಳೆಗಾರರು ವಿವಿಧ ಬೆಳೆಗಳು ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಕೈಗೊಂಡು ಬಹುಮೂಲಗಳಿಂದ ಆದಾಯವನ್ನು ಪಡೆಯುವ ನಿಟ್ಟಿನಲ್ಲಿ ಸಮಗ್ರ ಕೃಷಿಗೆ ಉತ್ತೇಜನ ನೀಡಲು ಆಯೋಗ ಕಾರ್ಯೋನ್ಮುಖವಾಗಿದೆ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಕೃಷಿ ಮತ್ತು ತೋಟಗಾರಿಕಾ ಇಲಾಖೆ ಅಧಿಕಾರಿಗಳ ಜತೆ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ದಿಸೆಯಲ್ಲಿ ಅಕ್ಟೋಬರ್ ಕೊನೆಯ ವಾರದಲ್ಲಿ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಕೃಷಿ ಬೆಲೆ ಆಯೋಗ ಮತ್ತು ಕೇಂದ್ರೀಯ ತೋಟಗಾರಿಕಾ ವಿಜ್ಞಾನ ಸಂಸ್ಥೆ, ಶಿವನೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಕ್ಯಾಂಪ್ಕೋ, ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಈ ಕಾರ್ಯಾಗಾರ ನಡೆಯಲಿದೆ ಎಂದು ಅವರು ಹೇಳಿದರು.
ರೈತರು ಅಡಿಕೆ ಜೊತೆ ವೌಲ್ಯವರ್ಧಿತ ಕೃಷಿ ಚಟವಟಿಕೆಗಳ ಮೂಲಕ ವಿವಿಧ ಮೂಲಗಳಿಂದ ಆದಾಯ ಪಡೆಯಲು ಉತ್ತೇಜನ ನೀಡಲಾಗುವುದು. ದ.ಕ. ಜಿಲ್ಲೆಯಲ್ಲಿ ಪ್ರಾಥಮಿಕವಾಗಿ ಈ ವ್ಯವಸ್ಥೆ ಅನುಷ್ಠಾನಗೊಳಿಸಲಾಗುವುದು. ಇದಕ್ಕಾಗಿ ಜಿಲ್ಲೆಯ ಕೆಲವು ಗ್ರಾಮಗಳನ್ನು ಆಯ್ದುಕೊಂಡು ಈ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಿ ಇದರ ಫಲಿತಾಂಶಗಳನ್ನು ನೋಡಿ ಮುಂದೆ ಜಿಲ್ಲಾಯಾದ್ಯಂತ ಹಾಗೂ ರಾಜ್ಯಾದ್ಯಂತ ಕಾರ್ಯಯೋಜನೆ ರೂಪಿಸಲು ಆರ್ಥಿಕ ಸಂಪನ್ಮೂಲಕ್ಕಾಗಿ ರಾಜ್ಯಕ್ಕೆ ವರದಿಯೊಂದನ್ನು ಬೆಲೆ ಆಯೋಗ ಸಲ್ಲಿಸಲಿದೆ ಎಂದರು.