ಸೈನಿಕರ ಮೇಲಿನ ಉಗ್ರರ ದಾಳಿ ಖಂಡನೀಯ:ಡಿ.ಎಚ್. ಶಂಕರಮೂರ್ತಿ
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘದ ನೂತನ ಸಭಾಭವನ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನಾ ಸಮಾರಂಭದ
ಮೂಡಿಗೆರೆ, ಸೆ.20: ಉರಿಯಲ್ಲಿ ನಡೆದ ಭಾರತೀಯ ಸೈನಿಕರ ಮೇಲೆ ದಾಳಿಯು ಭಾರತದ ಮೇಲಿನ ಸಂಚು. ಇದನ್ನು ಭಾರತೀಯರೆಲ್ಲರೂ ಒಂದಾಗಿ ಎದುರಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿಳಿಸಿದರು.
ಅವರು ಪಟ್ಟಣದ ರೈತಭವನ ಆವರಣದಲ್ಲಿ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘದ ನೂತನ ಸಭಾಭವನ ಮತ್ತು ವಾಣಿಜ್ಯ ಸಂಕೀರ್ಣಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಮಲೆನಾಡಿನಲ್ಲಿ ಉತ್ತಮ ಮಳೆ ಬೀಳುತ್ತಿದ್ದ ಕಾಲವೊಂದಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಪ್ರಕೃತಿ ಮುನಿಸಿಕೊಂಡಿದೆೆ. ಬರಗಾಲದ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಕೂಡಲೇ ಸರಕಾರ ಎಚ್ಚರಗೊಳ್ಳಬೇಕು. ಕುಡಿಯುವ ನೀರಿಗೆ ಹಾಹಾಕಾರ ಉಂಟಾದಾಗ ಎದ್ದೇಳುವ ಬದಲು ಈಗಲೇ ಜಾಗೃತರಾಗಬೇಕು ಎಂದು ಒತ್ತಾಯಿಸಿದರು.
ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಇಲ್ಲಿನ ಅಸ್ಪತ್ರೆಗಳಲ್ಲಿ ವೈದ್ಯರ ಸಮಸ್ಯೆ ಹೆಚ್ಚಾಗಿದ್ದು, ರೋಗಿಗಳು ಪರಿತಪಿಸುತ್ತಿದ್ದಾರೆ. ಇದನ್ನು ತಪ್ಪಿಸಲು ಹೊಸದಾಗಿ ಪದವಿ ಪಡೆದವರಿಗೆ ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯ ನಂತರ ಪ್ರಮಾಣ ಪತ್ರ ನೀಡುವ ಕಾನೂನು ಕಡ್ಡಾಯಗೊಳಿಸಬೇಕು. ಮಲೆನಾಡು ಅಭಿವೃದ್ಧ್ದಿಗೆ ಸರಕಾರ ಕೇವಲ 40 ಕೋಟಿ ರೂ. ನೀಡುತ್ತಿದೆ. ಈ ಭಾಗದ 60 ಜನ ಶಾಸಕರಿಗೆ ಯಾವುದಕ್ಕೂ ಸಾಲುತ್ತಿಲ್ಲ ಎಂದರು.
ವಿಧಾನ ಪರಿಷತ್ ಸದಸ್ಯರಾದ ಮೋಟಮ್ಮ ಮತ್ತು ಪ್ರಾಣೇಶ್ ಮಾತನಾಡಿದರು. ಇದಕ್ಕೂ ಮೊದಲು ವಿವಿಧ ವಾಣಿಜ್ಯ ಸಂಕೀರ್ಣಗಳು ಮತ್ತು ಮಿನಿ ಕಲ್ಯಾಣ ಮಂಟಪಗಳನ್ನು ಉದ್ಘಾಟಿಸಲಾಯಿತು.
ಕಾರ್ುಕ್ರಮದಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕ್ನ ಬೋಜೆಗೌಡ, ತಾಪಂ ಅಧ್ಯಕ್ಷ ಕೆ.ಸಿ. ರತನ್, ಶಿವಣ್ಣ ಹಳಸೆ, ಲಕ್ಷ್ಮಣಗೌಡ ಮಗ್ಗಲಮಕ್ಕಿ, ಪ್ರಮೋದ್ ದುಂಡುಗ, ಹೇಮಶೇಖರ್, ರಶ್ಮಿ ಸುದೀಪ್, ರಂಜನ್ ಅಜಿತ್ಕುಮಾರ್, ಜಯಪಾಲ್, ಜಯತ್ಬಿಧರಹಳ್ಳಿ, ದಿನೇಶ್ದೇವೃಂದ, ಒ.ಎಸ್. ಗೋಪಾಲಗೌಡ ಉಪಸ್ಥಿತರಿದ್ದರು.