ಮಾರಣಾಂತಿಕ ಹಲ್ಲೆ ಪ್ರಕರಣ
ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ದಂಡ
ವೀರಾಜಪೇಟೆ,ನ.26: ಗೋಣಿಕೊಪ್ಪಲು ಸಮೀಪದ ಅರವತ್ತೊಕ್ಕಲು ಗ್ರಾಮದ ಎಚ್.ಕೆ.ರವಿ ಎಂಬಾತನ ಮೇಲೆ ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದ ಮೇರೆಗೆ ಇಲ್ಲಿನ ಎರಡನೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಎಂ.ನಾಗರಾಜ ಅವರು ಆರೋಪಿಗಳಾದ ಎಚ್.ಎಸ್.ಅನಿ ಹಾಗೂ ಎಚ್.ಜೆ. ದಿಲೀಪ್ ಇವರುಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 30,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಜ.11-2014ರಂದು ರಾತ್ರಿ 9:15ರ ಸಮಯದಲ್ಲಿ ಅನಿ, ದಿಲೀಪ್ ಹಾಗೂ ರವಿ ಇವರುಗಳ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿದಾಗ ಇಬ್ಬರು ರವಿಯ ತಲೆಗೆ ಕಡಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರಿಂದ ಆತನಿಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದ್ದು, ಗೋಣಿಕೊಪ್ಪ ಪೊಲೀಸರು ಕೊಲೆ ಯತ್ನದ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದರು.
Next Story