ಗಾಂಜಾ ಮಾರಾಟ: ನಾಲ್ವರ ಸೆರೆ
ಶಿವಮೊಗ್ಗ, ಮಾ. 11: ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಹಚ್ಚಿರುವ ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಐಬಿ) ಪೊಲೀಸರು ಅಪ್ಪ-ಮಗ ಸೇರಿದಂತೆ ನಾಲ್ವರನ್ನು ಬಂಧಿಸಿದ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಉಕ್ಕುಂದ ಕ್ರಾಸ್ ಬಳಿ ನಡೆದಿದೆ.
ಉಕ್ಕುಂದ ಗ್ರಾಮದಲ್ಲಿ ಟೀ ಅಂಗಡಿಯಿಟ್ಟುಕೊಂಡಿರುವ ಹನುಮಂತಪ್ಪ(64), ಅವರ ಪುತ್ರ ಹರೀಶ್(39), ಭದ್ರಾವತಿ ಪಟ್ಟಣದ ಗೌಳಿಗರ ಬೀದಿಯ ನಿವಾಸಿ ಹಸೀನಾಬಾನು(45) ಹಾಗೂ ದಿನೇಶ್(40) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಓರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
Next Story