ಯಾರು ಸಾಲ ಕೊಟ್ಟಿದ್ದಾರೋ ಅವರೇ ಮನ್ನಾ ಮಾಡಲಿ : ಸಿಎಂ ಸಿದ್ದರಾಮಯ್ಯ
ಮೈಸೂರು,ಎ.6:"ರೈತರ ಸಾಲ ಮನ್ನಾ ನಾವ್ಯಾಕೆ ಮಾಡಬೇಕು. ಸಾಲ ಕೊಟ್ಟಿರೋರು ಯಾರು ಹೇಳಿ ? ಅವರು ಕೊಟ್ಟಿರುವ ಸಾಲ ಅವರೇ ಮನ್ನಾ ಮಾಡಲಿ" ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಉಪಚುನಾವಣೆಯ ಪ್ರಚಾರದಲ್ಲಿ ನಿರತರಾಗಿರುವ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ " ಸಾಲ ಮನ್ನಾ ಅವರ(ಕೇಂದ್ರ ಸರಕಾರ) ಜವಾಬ್ದಾರಿ” ಎಂದು ಹೇಳಿದ್ದಾರೆ.
"ರಾಷ್ಟ್ರೀಕೃತ ಬ್ಯಾಂಕ್ ಸಾಲ ನಾವು ಮನ್ನಾ ಮಾಡಿದ್ರೆ. ನಮ್ಮ ಬ್ಯಾಂಕ್ ಕೊಟ್ಟಿರುವ ಸಾಲ ಮನ್ನಾ ಮಾಡುವರ್ಯಾರು" ರೈತರ ಸಾಲ ಮನ್ನಾ ಬೇಡಿಕೆಗೆ ಸಿದ್ದರಾಮಯ್ಯ ಸುದ್ದಿಗಾರರನ್ನೇ ಪ್ರಶ್ನಿಸಿದರು.
Next Story