ಚಿಕ್ಕಮಗಳೂರು: ವಿದ್ಯುತ್ ಸ್ಪರ್ಶಕ್ಕೆ ಆನೆ ಬಲಿ
ಚಿಕ್ಕಮಗಳೂರು, ಸೆ.5: ವಿದ್ಯುತ್ ತಂತಿ ಸ್ಪರ್ಶಿಸುವ ಮೂಲಕ ಸುಮಾರು 25 ವರ್ಷಗಳ ಗಂಡಾನೆಯೊಂದು ಮೃತಪಟ್ಟಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಹೋಬಳಿಯನಂದಿ ಬಟ್ಟಲು ತಾಂಡ್ಯ ಎಂಬಲ್ಲಿ ಪತ್ತೆಯಾಗಿದೆ.
ಗಂಡಾನೆಯು ಕಾಡಂಚಿನ ಜಮೀನಿನೊಳಗೆ ಪ್ರವೇಶ ಪಡೆದು ಮೃತಪಟ್ಟಿದೆ. ಈ ಆನೆ ಬಿದ್ದಿರುವ ಸಮೀಪದಲ್ಲಿ ವಿದ್ಯುತ್ ತಂತಿ ಹರಿಯುತ್ತಿದ್ದು, ಆನೆಯು ವಿದ್ಯುತ್ ತಮತಿಗೆ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ತರೀಕೆರೆ ಮತ್ತು ಲಿಂಗದಹಳ್ಳಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story