ತಲೆಗೆ ಚೆಂಡಿನ ಏಟು ಬಿದ್ದು ಆಸ್ಪತ್ರೆಗೆ ದಾಖಲಾದ ಇಶಾನ್ ಕಿಶನ್
Photo:twitter
ಧರ್ಮಶಾಲಾ: ಶ್ರೀಲಂಕಾ ವಿರುದ್ಧ ಶನಿವಾರ ನಡೆದ ಎರಡನೇ ಟ್ವೆಂಟಿ-20 ಪಂದ್ಯದ ವೇಳೆ ಭಾರತದ ಬ್ಯಾಟರ್ ಇಶಾನ್ ಕಿಶನ್ ಅವರ ತಲೆಗೆ ಚೆಂಡಿನ ಏಟು ತಗಲಿ ಗಾಯವಾಗಿದ್ದು, ಅವರನ್ನು ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿರುವ ಆಸ್ಪತ್ರೆಗೆ ದಾಖಸಲಾಯಿತು ಎಂದು ವರದಿಯಾಗಿದೆ.
ಶ್ರೀಲಂಕಾ ಬ್ಯಾಟರ್ ದಿನೇಶ್ ಚಾಂಡಿಮಾಲ್ ಅವರು ಎರಡನೇ ಟ್ವೆಂಟಿ-20ಯಲ್ಲಿ ಫೀಲ್ಡಿಂಗ್ ಮಾಡುವಾಗ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.
"ನಾನು ಭಾರತದ ಕ್ರಿಕೆಟ್ ತಂಡದೊಂದಿಗಿದ್ದೆ. ಚೆಂಡಿನ ಏಟಿನ ಬಿದ್ದು ತಲೆಗೆ ಗಾಯವಾಗಿರುವ ಭಾರತೀಯ ಆಟಗಾರನನ್ನು ಆಸ್ಪತ್ರೆಗೆ ಕರೆತರಲಾಗಿದೆ ಎಂಬ ಮಾಹಿತಿ ನನಗೆ ಲಭಿಸಿತು. ಅವರ ಸಿಟಿ ಸ್ಕ್ಯಾನಿಂಗ್ ನಡೆಸಲಾಯಿತು ಹಾಗೂ ಅವರ ಮೇಲೆ ನಿಗಾವಹಿಸಲಾಗಿದೆ" ಎಂದು ಡಾ. ಶುಭಂ ಹೇಳಿದ್ದಾರೆ.
"ಎರಡನೇ ಟ್ವೆಂಟಿ-20ಯ ವೇಳೆ ಹೆಬ್ಬೆರಳಿಗೆ ಗಾಯವಾದ ನಂತರ ಶ್ರೀಲಂಕಾದ ಆಟಗಾರನನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಇದೀಗ ಎಲ್ಲವನ್ನೂ ಮೇಲ್ವಿಚಾರಣೆ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.