ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ' ಯಾತ್ರೆಗೆ ಪ್ರಶಾಂತ್ ಭೂಷಣ್ ಸಾಥ್
ಹೈದರಾಬಾದ್: ತೆಲಂಗಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ಯಾತ್ರೆ' ರವಿವಾರ ತನ್ನ 60 ನೇ ದಿನಕ್ಕೆ ಕಾಲಿಟ್ಟಿದ್ದು, ಸಾಮಾಜಿಕ ಹೋರಾಟಗಾರ ಹಾಗೂ ವಕೀಲ ಪ್ರಶಾಂತ್ ಭೂಷಣ್ ಯಾತ್ರೆಯೊಂದಿಗೆ ಹೆಜ್ಜೆ ಹಾಕಿದರು.
ಎಸ್ಸಿ ವರ್ಗೀಕರಣಕ್ಕಾಗಿ ಹೋರಾಟ ನಡೆಸುತ್ತಿರುವ ಮಾದಿಗ ಮೀಸಲಾತಿ ಹೋರಾಟ ಸಮಿತಿಯ (ಎಂಆರ್ಪಿಎಸ್) ಮುಖಂಡ ಮಂದ ಕೃಷ್ಣ ಮಾದಿಗ ಅವರು ರವಿವಾರ ಬೆಳಗ್ಗೆ ಮೇದಕ್ ಜಿಲ್ಲೆಯ ಅಲ್ಲದುರ್ಗದಲ್ಲಿ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡರು ಎಂದು ಪಕ್ಷದ ಮೂಲಗಳು ತಿಳಿಸಿವೆ.
"ಇಂದು ಭಾರತ್ ಜೋಡೋ ಯಾತ್ರೆಯ 60 ನೇ ದಿನವಾಗಿದೆ ಹಾಗೂ ಇದು ಪ್ರತಿದಿನ ಬೆಳಿಗ್ಗೆ ಮೈಸೂರಿನ ಸೇವಾದಳದ ಪ್ಯಾರಿ ಜಾನ್ ಅವರ ನೇತೃತ್ವದಲ್ಲಿ ರಾಷ್ಟ್ರಗೀತೆ, ಧ್ವಜ ಗೀತೆ ಮತ್ತು ರಾಷ್ಟ್ರಗೀತೆಯನ್ನು ಹಾಡುವುದರೊಂದಿಗೆ ಆರಂಭವಾಗುತ್ತದೆ. ಇಂದು ನಾವು ಮೇದಕ್ನಿಂದ ಕಾಮರೆಡ್ಡಿ ಜಿಲ್ಲೆಗೆ ತೆರಳುತ್ತೇವೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಮೇದಕ್ ಜಿಲ್ಲೆಯ ಪೆದ್ದಾಪುರ ಗ್ರಾಮದಲ್ಲಿ ಶನಿವಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ 2014 ರಿಂದ ನಿರುದ್ಯೋಗ ಹಾಗೂ ಬೆಲೆ ಏರಿಕೆ ತೀವ್ರವಾಗಿದೆ ಎಂದು ಆರೋಪಿಸಿದರು.
ಪಾದಯಾತ್ರೆ ಅಕ್ಟೋಬರ್ 23 ರಂದು ರಾಜ್ಯವನ್ನು ಪ್ರವೇಶಿಸಿತು ಮತ್ತು ತೆಲಂಗಾಣ ಯಾತ್ರೆ ಸೋಮವಾರ ಮುಕ್ತಾಯಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ವಯನಾಡ್ ಸಂಸದ ರಾಹುಲ್ ಸೋಮವಾರ ಕಾಮರೆಡ್ಡಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾಯಿತು.
It is the 60th Day of #BharatJodoYatra and it began like every morning with Pyari Jan of the Seva Dal from Mysuru leading the singing of the National Song, Dhwaj Geet, & National Anthem. Today we move from Medak to Kamareddy district. pic.twitter.com/Q8KlZIiSRv
— Jairam Ramesh (@Jairam_Ramesh) November 6, 2022