-

ಈ ಹೊತ್ತಿನ ಹೊತ್ತಿಗೆ

‘ಚೂಡಾಮಣಿ’ ರಾಮ ಸೀತೆಯರ ಪ್ರೇಮ ಕತೆ

-

ಕನ್ನಡ ರಂಗಭೂಮಿ ಸಾಹಿತ್ಯದಲ್ಲಿ ಪುರಾಣಗಳನ್ನು ವಸ್ತುವಾಗಿಟ್ಟುಕೊಂಡು ‘ಮುರಿದು ಕಟ್ಟುವ’ ಕೆಲವನ್ನು ಹಲವು ಹಿರಿಯ ನಾಟಕಕಾರರು ಮಾಡಿದ್ದಾರೆ. ಕುವೆಂಪು ಅವರ ‘ಸ್ಮಶಾನ ಕುರುಕ್ಷೇತ್ರ’ದಿಂದ ಹಿಡಿದು ಕಾರ್ನಾಡ್ ಅವರ ‘ಯಯಾತಿ’ಯವರೆಗೆ ಬೇರೆ ಬೇರೆ ನೆಲೆಗಳಲ್ಲಿ ಈ ಪ್ರಯತ್ನ ನಡೆದಿದೆ. ಇದೇ ಸಂದರ್ಭದಲ್ಲಿ ಪುರಾಣಗಳ ಕತೆಗಳನ್ನು ರಮ್ಯವಾಗಿ ರಂಗಭೂಮಿಯಲ್ಲಿ ನಿರೂಪಿಸುವ ಪ್ರಯತ್ನವೂ ನಡೆದಿದೆ. ಇತ್ತೀಚಿನ ದಿನಗಳಲ್ಲಿ ರಂಗ ಸಾಹಿತ್ಯದ ಬರವಣಿಗೆ ಕಡಿಮೆಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ, ಆಶಾ ರಘು ಅವರು ‘ರಾಮಾಯಣ’ ಕತೆಯ ಭಾಗವೊಂದನ್ನು ಪುನರ್ ನಿರೂಪಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದೊಂದು ಸಂಗೀತ ನಾಟಕವಾಗಿದೆ. ‘ಅಭಿಜ್ಞಾನ ಶಾಕುಂತಲಾ’ ನಾಟಕದ ಮೂಲಕ ದುಷ್ಯಂತ ಶಕುಂತಳೆಯರ ಪ್ರೇಮ ಕತೆಯನ್ನು ತೆರೆದಿಡುತ್ತದೆ. ಅದನ್ನೇ ಮಾದರಿಯಾಗಿರಿಸಿಕೊಂಡು ‘ಚೂಡಾಮಣಿ’ಯ ಮೂಲಕ ಶ್ರೀರಾಮ ಮತ್ತು ಸೀತೆಯರ ನಡುವಿನ ಪ್ರೇಮ ಕತೆಯನ್ನು ನಿರೂಪಿಸಲು ಆಶಾ ರಘು ಪ್ರಯತ್ನಿಸಿದ್ದಾರೆ.

‘‘ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕದಲ್ಲಿ ಉಂಗುರ ಪ್ರೇಮದ ಸಂಕೇತವಾದಂತೆ, ಒಂದು ನಿರ್ಣಾಯಕ ಉಪಾಧಿಯಾದಂತೆ ಈ ನಾಟಕದಲ್ಲಿ ಚೂಡಾಮಣಿಯೇ ಸೀತಾರಾಮರ ಪ್ರೇಮದ ಸಂಕೇತವಾಗಿದೆ. ನಾಟಕದುದ್ದಕ್ಕೂ ಮತ್ತೆ ಮತ್ತೆ ಪುನರಾವರ್ತನೆಯಾಗುವ ‘ರೆಕರಿಂಗ್ ಮೆಟಫರ್’ ಆಗಿದೆ.....ಹೆಂಡತಿಯಾದವಳು ಗಂಡನ ಸಹಚಾರಿಣಿಯೆಂಬುದು ನಮ್ಮ ಸಾಮಾನ್ಯ ನಂಬಿಕೆಯಾಗಿದೆ. ಆದರೆ ‘ಚೂಡಾಮಣಿ’ ನಾಟಕದಲ್ಲಿ ಕೊನೆಗೆ ರಾಮನೇ ಸೀತೆಯನ್ನು ಹಿಂಬಾಲಿಸಲು ಬಯಸುವ ಸನ್ನಿವೇಶ ನಿಜಕ್ಕೂ ಹೃದಯಂಗಮವಾಗಿದೆ. ಈ ಕೃತಿ ಯಾವುದೇ ರಂಗ ನಿರ್ದೇಶಕನಿಗೆ ಸವಾಲೆಸೆವ ನಾಟಕವಲ್ಲ. ಬದಲಾಗಿ ನಿರ್ದೇಶಕನಿಗೆ ಸರ್ವ ಸ್ವಾತಂತ್ರ ನೀಡಬಲ್ಲ ನಾಟಕವಾಗಿದೆ’’ ಬೆನ್ನುಡಿಯಲ್ಲಿ ಡಾ. ಟಿ. ಎನ್. ವಾಸುದೇವಮೂರ್ತಿ ಅವರು ಬರೆಯುತ್ತಾರೆ.

‘‘ನೆನಪಿನ ಬುತ್ತಿಯಾಗಿ ದಾಂಪತ್ಯದ ಧ್ಯೋತಕವಾಗಿ ಚೂಡಾಮಣಿಯ ನಿರ್ವಚನವಾಗುತ್ತಲೇ ಕುಟೀರ ಮತ್ತು ಅಯೋಧ್ಯೆ ಎಂಬ ಎರಡು ಚಿತ್ರಣಗಳ ಮೂಲಕ ಭಿನ್ನ ಸಾಮಾಜಿಕ ಸಂದರ್ಭಗಳನ್ನು ನಿರೂಪಣೆ ಮಾಡುವುದು ಈ ನಾಟಕದ ಶಕ್ತಿಗಳಲ್ಲಿ ಮುಖ್ಯವಾದುದು. ಆಪ್ತವಾಗಿ ಸಂವಹನ ಮಾಡುವ ಪಾತ್ರಗಳು, ದೇಸಿ ನುಡಿಗಟ್ಟು, ಕಥೆಹೇಳುವ ತಂತ್ರ, ಕಾವ್ಯಾತ್ಮಕ ಭಾಷೆ, ಕಥಾ ಹಂದರಕ್ಕೆ ಪೂರಕವಾಗಿ ನಿಲ್ಲುವ ಹಾಡುಗಳು, ಸನ್ನಿವೇಶ ಮತ್ತು ದೃಶ್ಯಗಳ ಕಟ್ಟುವಿಕೆ, ನವಿರು ಸಂಭಾಷಣೆ ಇತ್ಯಾದಿಗಳು ನಾಟಕವನ್ನು ಓದಲು ಪ್ರಿಯವೆನಿಸುತ್ತದೆ....’’ ಎಂದು ಲೇಖಕ ಬೇಲೂರು ರಘುನಂದನ ಅವರು ಅಭಿಪ್ರಾಯಪಡುತ್ತಾರೆ.

ಕೃತಿಯಲ್ಲಿ ರಾಮ, ಸೀತೆ, ಶಕ, ಕಸ್ತೂರಿ, ಕುಶ, ಲವ, ಧನ್ಯಮ್ಮ, ವಾಲ್ಮೀಕಿ, ಲಕ್ಷ್ಮಣ, ಭರತ, ಶತ್ರುಘ್ನ ಮುಖ್ಯ ಪಾತ್ರಗಳು. ಒಟ್ಟು 21 ದೃಶ್ಯಗಳಿವೆ. ನಿರ್ದೇಶಕರ ಮನಸ್ಥಿತಿಗೆ ಪೂರಕವಾಗಿ ಒಗ್ಗುವ ರಂಗಚಲನೆ ಈ ನಾಟಕದಲ್ಲಿದೆ. ಸಾಹಿತ್ಯ ಲೋಕ ಪಬ್ಲಿಕೇಶನ್ಸ್, ಬೆಂಗಳೂರು ಇವರು ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 80. ಮುಖಬೆಲೆ 80 ರೂಪಾಯಿ. ಆಸಕ್ತರು 99459 39436 ದೂರವಾಣಿಯನ್ನು ಸಂಪರ್ಕಿಸಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top