ಗೂಳಿ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಹೇಮಾಮಾಲಿನಿ
ಮಥುರಾ, 4: ಕೆಲವು ದಿನಗಳ ಹಿಂದೆ ಬಿಜೆಪಿ ಸಂಸದೆ ಹೇಮಾಮಾಲಿನಿ ಅವರು ಮಥುರಾ ಜಂಕ್ಷನ್ ರೈಲು ನಿಲ್ದಾಣದಲ್ಲಿ ಗೂಳಿ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಈಗ ಪ್ಲಾಟ್ಫಾರ್ಮನಲ್ಲಿ ಜಾನುವಾರುಗಳ ಹಾವಳಿಯನ್ನು ತಡೆಯಲು ವಿಫಲರಾದ ಆರೋಪದಲ್ಲಿ ಸ್ಟೇಷನ್ ಮಾಸ್ಟರ್ ಕೆ.ಎಲ್ ಮೀನಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಘಟನೆಯ ಕುರಿತು ತನಿಖೆಗೂ ಆದೇಶಿಸಲಾಗಿದೆ ಎಂದು ಉತ್ತರ ಮಧ್ಯ ರೈಲ್ವೆಯ ವಿಭಾಗೀಯ ವಾಣಿಜ್ಯಿಕ ಪ್ರಬಂಧಕ ಸಂಚಿತ್ ತ್ಯಾಗಿ ತಿಳಿಸಿದರು.
ಹೇಮಾಮಾಲಿನಿ ಅವರು ಮಥುರಾ ನಿಲ್ದಾಣದ ನವೀಕರಣ ಸಾಧ್ಯತೆಯನ್ನು ಪರಿಶೀಲಿಸಲೆಂದು ತೆರಳಿದ್ದಾಗ ಪ್ಲಾಟ್ಫಾರ್ಮ್ನಲ್ಲಿದ್ದ ಬಿಡಾಡಿ ಗೂಳಿಯೊಂದು ಅವರನ್ನು ತಿವಿಯಲು ಮುಂದಾಗಿದ್ದು, ಅವರು ಕೂದಲೆಳೆಯ ಅಂತರದಿಂದ ಪಾರಾಗಿ ದ್ದರು.
Next Story