ಗುಜರಾತ್ನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ ಅರ್ಚಕನ ಮೇಲೆ ದಾಳಿ
ಗಾಂಧಿನಗರ, ಡಿ.8: ಗುಜರಾತ್ನಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದ ಸ್ವಾಮಿ ನಾರಾಯಣ ಗುರುಕುಲದ ಅರ್ಚಕನ ಮೇಲೆ ಕಳೆದ ರಾತ್ರಿ ಅಚರಿಚಿತರು ದಾಳಿ ನಡೆಸಿದ್ದಾರೆ.
ಸ್ವಾಮಿ ನಾರಾಯಣ ಮಂದಿರದ ಅರ್ಚಕ ಸ್ವಾಮಿ ಭಕ್ತಿ ಪ್ರಸಾದ್ ಅಪರಿಚಿತ ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಸ್ಥಿರವಾಗಿದೆ.
ಪ್ರಸಾದ್ ಅವರು ಜುನಾಗಢ ಪ್ರದೇಶದಲ್ಲಿ ಇತ್ತೀಚೆಗೆ ಬಿಜೆಪಿ ಪರ ಪ್ರಚಾರ ಮಾಡಿದ್ದರು.
ತನ್ನ ಮೇಲಿನ ದಾಳಿಯ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಕೈವಾಡ ಇದೆ ಎಂದು ಅರ್ಚಕ ಭಕ್ತಿ ಪ್ರಸಾದ್ ಆರೋಪಿಸಿದ್ದಾರೆ. ಹೀಗಾಗಿ ಈ ದಾಳಿಯು ರಾಜಕೀಯ ಬಣ್ಣ ಪಡೆದುಕೊಂಡಿದೆ. ಚುನಾವಣೆ ಮುನ್ನಾದಿನ ಈ ಘಟನೆ ನಡೆದಿದೆ. 182 ಸದಸ್ಯರ ಗುಜರಾತ್ ಅಸೆಂಬ್ಲಿಯ ಮೊದಲ ಹಂತದ ಚುನಾವಣೆ ಶನಿವಾರ ನಡೆಯಲಿದೆ.
Next Story