ವೇಟ್ಲಿಫ್ಟಿಂಗ್ : ಕಾಮನ್ ವೆಲ್ತ್ ನಲ್ಲಿ ಬೆಳ್ಳಿ ಗೆದ್ದ ಕುಂದಾಪುರದ ಗುರುರಾಜ್
ಹೊಸದಿಲ್ಲಿ, ಎ. 5: ಭಾರತದ ಪಿ. ಗುರುರಾಜ್ ಅವರು 2018ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ದೇಶಕ್ಕೆ ಮೊದಲ ಪದಕ ಗೆದ್ದು ಕೊಟ್ಟಿದ್ದಾರೆ.
ವೇಟ್ಲಿಫ್ಟಿಂಗ್ನಲ್ಲಿ 56 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ 111 ಕೆಜಿ ಸ್ನ್ಯಾಚ್ ಹಾಗೂ 138 ಕೆ.ಜಿ. ಕ್ಲೀನ್ ಆ್ಯಂಡ್ ಜರ್ಕ್ ಭಾರ ಎತ್ತುವ ಮೂಲಕ 249 ಕೆ.ಜಿ. ಯೊಂದಿಗೆ ಬೆಳ್ಳಿ ಪದಕ ಗೆದ್ದರು. ಕಳೆದ ಕಾಮನ್ವೆಲ್ತ್ ಕೂಟದಲ್ಲಿ ಮೊಟ್ಟಮೊದಲ ಬಾರಿಗೆ ಭಾಗವಹಿಸಿದ್ದ ಇವರು, ಚಿನ್ನದ ಪದಕ ಗೆದ್ದುಕೊಂಡಿದ್ದರು.
ಗುರುರಾಜ್ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ಮಹಾಬಲ ಪೂಜಾರಿ ಮತ್ತು ಪದ್ದು ಪೂಜಾರಿ ದಂಪತಿಯ ಸುಪುತ್ರ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಶಾಲೆ ಹಾಗು ಪಿಯು ಕಾಲೇಜು ಮತ್ತು ಉಜಿರೆಯ ಎಸ್ ಡಿ ಎಂ ಕಾಲೇಜಿನ ಹಳೆ ವಿದ್ಯಾರ್ಥಿ. ಕೊಲ್ಲೂರಿನಲ್ಲಿ ಸುಕೇಶ್ ಶೆಟ್ಟಿ ಹಾಗು ಉಜಿರೆಯಲ್ಲಿ ರಾಜೇಂದ್ರ ಪ್ರಸಾದ್ ಅವರಿಂದ ತರಬೇತಿ ಪಡೆದಿದ್ದಾರೆ.
Next Story