ಬಿಲ್ಡರ್ಗೆ ರವಿ ಪೂಜಾರಿಯಿಂದ ಬೆದರಿಕೆ ?
ಥಾಣೆ, ಎ. 25: ಹಣ ನೀಡುವಂತೆ ಭೂಗತ ಪಾತಕಿ ರವಿ ಪೂಜಾರಿಯಿಂದ ಕರೆ ಬಂದಿದೆ ಎಂದು ಆರೋಪಿಸಿ ಥಾಣೆ ಜಿಲ್ಲೆಯ ಮುಬ್ರಾ ಟೌನ್ಶಿಪ್ನ ಬಿಲ್ಡರ್ ಒಬ್ಬರು ಪೊಲೀಸ್ ದೂರು ನೀಡಿದ್ದಾರೆ.
ಕಳೆದ ವರ್ಷ ಜನವರಿಯಿಂದ 2 ಲಕ್ಷ ರೂಪಾಯಿ ಬೇಡಿಕೆ ಇರಿಸಿ ರವಿ ಪೂಜಾರಿ ಎಂದು ಹೇಳಿಕೊಳ್ಳುವ ವ್ಯಕ್ತಿ ಕರೆ ಮಾಡುತ್ತಿದ್ದಾನೆ ಎಂದು ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದಾಖಲಿಸಿರುವ ದೂರಿನಲ್ಲಿ ಬಿಲ್ಡರ್ ಹೇಳಿದ್ದಾರೆ. ಭೂ ಯೋಜನೆಯೊಂದರಿಂದ ದೂರವಿರಿಸುವುದಕ್ಕಾಗಿ ನನ್ನನ್ನು ಹತ್ಯೆಗೈಯಲು ವಿರೋಧಿ ಬಿಲ್ಡರ್ ರವಿ ಪೂಜಾರಿಗೆ 3 ಕೋ. ರೂ. ಸುಪಾರಿ ನೀಡಲು ಸಿದ್ದವಾಗಿದ್ದಾನೆ ಎಂದು ಕರೆ ಮಾಡಿದಾತ ಹೇಳಿರುವುದಾಗಿ ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಹಣ ನೀಡದೇ ಇದ್ದರೆ ಪರಿಣಾಮ ಘೋರವಾದೀತು ಎಂದು ಕರೆ ನೀಡಿದಾತ ಬೆದರಿಕೆ ಒಡ್ಡಿರುವುದಾಗಿ ಕೂಡ ಬಿಲ್ಡರ್ ದೂರಿದ್ದಾರೆ. ಬಿಲ್ಡರ್ನ ದೂರಿನ ಹಿನ್ನೆಲೆಯಲ್ಲಿ ಥಾಣೆಯ ಪೊಲೀಸ್ನ ಸುಲಿಗೆ ವಿರೋಧಿ ಘಟಕ ತನಿಖೆ ನಡೆಸುತ್ತಿದೆ.
Next Story