ದಲಿತ ಬಾಲಕಿಯ ತಲೆ ಕಡಿದು ಹತ್ಯೆ
ಸೇಲಂ, ಅ. 31: ದುರ್ವರ್ತನೆ ವಿರೋಧಿಸಿದ 13 ವರ್ಷದ ದಲಿತ ಬಾಲಕಿಯ ತಲೆಯನ್ನು ನೆರೆಯ ವ್ಯಕ್ತಿಯೋರ್ವ ಆಕೆಯ ತಾಯಿಯ ಎದುರಲ್ಲೇ ಕಡಿದ ಘಟನೆ ತಮಿಳುನಾಡು ಸೇಲಂ ಜಿಲ್ಲೆಯ ಅತ್ತೂರಿನಲ್ಲಿ ಸಂಭವಿಸಿದೆ.
ಮೇಲ್ಜಾತಿಗೆ ಸೇರಿದ ದಿನೇಶ್ ಕುಮಾರ್ ಬಾಲಕಿಯ ಜಾತಿ ನಿಂದಿಸಿ ಕತ್ತಿಯಿಂದ ತಲೆ ಕಡಿದಿದ್ದಾನೆ. ಆರೋಪಿ ದಿನೇಶ್ ಬಾಲಕಿಯಲ್ಲಿ ಲೈಂಗಿಕ ಆಕಾಂಕ್ಷೆ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಬಾಲಕಿ ನಿರಾಕರಿಸಿದ್ದಳು ಎನ್ನಲಾಗುತ್ತಿದೆ. ದಿನೇಶ್ ಕುಮಾರ್ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ತನಿಖೆ ನಡೆಯುತ್ತಿದೆ. ಆತನ ವಿರುದ್ಧ ಹತ್ಯೆ ಪ್ರಕರಣ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
Next Story