ಸಣ್ಣ ರೈತರ ಖಾತೆಗೆ ನೇರವಾಗಿ 6,000 ರೂ.ವರ್ಗಾವಣೆ: ಪಿಯೂಷ್ ಗೋಯೆಲ್
2019-20ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ
ಹೊಸದಿಲ್ಲಿ, ಫೆ.1: ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ ಎನ್ಡಿಎ ಸರಕಾರದ 2019-20ರ ಬಜೆಟ್ ಮುಖ್ಯಾಂಶಗಳು.
*ಆದಾಯ ತೆರಿಗೆ ಪಾವತಿದಾರರಿಗೆ ರಿಲೀಫ್, ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ. 5 ಲಕ್ಷ ರೂ.ಆದಾಯವಿರುವವರು ತೆರಿಗೆಯಿಂದ ಮುಕ್ತ.
*ಉದ್ಯೋಗ ಖಾತ್ರಿ ಯೋಜನೆಗೆ 60,000 ಕೋ.ರೂ. ಮೀಸಲು, ಅಗತ್ಯವೆನಿಸಿದರೆ ಮತ್ತಷ್ಟು ಹೆಚ್ಚಳ.
*ನೋಟು ರದ್ದತಿ ಬಳಿಕ ಕಪ್ಪು ಹಣ ಸಂಗ್ರಹ ಅನಾವರಣ, 1.30 ಲಕ್ಷ ಕೋಟಿ ರೂ. ಅಘೋಷಿತ ಆದಾಯ ಪತ್ತೆ. 3.38 ಲಕ್ಷ ಶೆಲ್ ಕಂಪೆನಿಗಳು ರದ್ದು.
*ಸಂಚಾರಿ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಕ್ರಮ, ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಕ್ರಮ
*ಸಾಗರಮಾಲಾ ಯೋಜನೆ ಮೂಲಕ ಹೊಸ ಅವಕಾಶ
*ಗಗನ ಯಾನ ಯೋಜನೆ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ತರ ಸಾಧನೆ
*ರಾಷ್ಟ್ರೀಯ ಶಿಕ್ಷಣ ಯೋಜನೆಗೆ 38,572 ಕೋ.ರೂ. ಮೀಸಲು
*ಎಸ್ಟಿ ವರ್ಗಕ್ಕೆ 50,000 ಕೋ.ರೂ., ಎಸ್ಸಿ ವರ್ಗಕ್ಕೆ 76,000 ಕೋ.ರೂ. ಅನುದಾನ
* ಉಳಿತಾಯ ಯೋಜನೆಗಳ ಹೂಡಿಕೆಗೆ ತೆರಿಗೆ ವಿನಾಯಿತಿ.
*ಗೃಹ ಸಾಲ 2 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ
* ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಖಾತೆಗೆ ನೇರವಾಗಿ ವಾರ್ಷಿಕ 6,000 ರೂ.ವರ್ಗಾವಣೆ. ಮೂರು ಹಂತಗಳಲ್ಲಿ ರೈತರಿಗೆ ಹಣ ತಲುಪಲಿದೆ.
*2 ಹೆಕ್ಟೇರ್ಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ಸೌಲಭ್ಯ
*ಕಿಸಾನ್ ಸಮ್ಮಾನ್ ಯೋಜನೆ 12 ಕೋಟಿ ರೈತರಿಗೆ ಲಾಭ, ಯೋಜನೆಗೆ 75,000 ಕೋ.ರೂ. ಮೀಸಲು
* ಪಶುಪಾಲನೆ, ಮೀನುಗಾರಿಕೆ ಯೋಜನೆಗೆ 700 ಕೋ.ರೂ.
*ಜಾನುವಾರು ಸಾಕಣೆಗೆ ಸಂಪೂರ್ಣ ನೆರವು
* ರೈತರ ಬೆಂಬಲ ಬೆಲೆ ಕನಿಷ್ಠ 1.5ರಷ್ಟು ಹೆಚ್ಚಳ
*ಬೀದಿಬದಿ ವ್ಯಾಪಾರಿ, ರಿಕ್ಷಾವಾಲಾಗೆ ಸೇರಿದಂತೆ ಅಸಂಘಟಿತ ಕಾರ್ಮಿಕರಿಗೆ ಪ್ರಧಾನಮಂತ್ರಿ ಶ್ರಮಯೋಗಿ ಮಂದಾನ್ ಪಿಂಚಣಿ ಯೋಜನೆ
*ಪ್ರತಿ ತಿಂಗಳು 100 ರೂ.ಕಟ್ಟುವ ಮೂಲಕ ಯೋಜನೆಗೆ ನೊಂದಾಯಿಸಿಕೊಳ್ಳಬಹುದು. 60 ವರ್ಷದ ಬಳಿಕ ಪ್ರತಿ ತಿಂಗಳು 3,000 ರೂ.ಪಿಂಚಣಿ ಸೌಲಭ್ಯ
*ರಕ್ಷಣಾ ವಲಯಕ್ಕೆ 3 ಲಕ್ಷ ಕೋಟಿ. ರೂ.ಗೂ ಅಧಿಕ ಮೊತ್ತ ಮೀಸಲು
*ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಮೊಬೈಲ್ ತಯಾರಿಕೆ
* ಮೊಬೈಲ್ ಡಾಟಾ ಬಳಕೆ ಶೇ.50ರಷ್ಟು ಹೆಚ್ಚಳ
* ತೆರಿಗೆ ಪಾವತಿಗೆ 24 ಗಂಟೆ ಆನ್ಲೈನ್ ಸೇವೆ
*260 ಮೊಬೈಲ್ ಉತ್ಪಾದನಾ ಕಂಪೆನಿಗಳು ಆರಂಭವಾಗಲಿವೆ
*ಶೇ.99.94ರಷ್ಟು ತೆರಿಗೆ ಪಾವತಿ
*ಗೋವುಗಳ ರಕ್ಷಣೆಗಾಗಿ ‘ರಾಷ್ಟ್ರೀಯ ಕಾಮಧೇನು ಆಯೋಗ’
2020ರ ವೇಳೆ ನವಭಾರತ ನಿರ್ಮಾಣ
* ವಿದೇಶಿ ನೇರ ಹೂಡಿಕೆ(ಎಫ್ಡಿಎ) ಪ್ರಮಾಣ ಹೆಚ್ಚಳ
* ರೇರಾ ಕಾಯ್ದೆ ಮೂಲಕ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ
*ಕಲ್ಲಿದ್ದಲು, ತರಂಗಾಂತರ ಸರಿಯಾದ ಬಳಕೆ
*ಎಸ್ಸಿ-ಎಸ್ಟಿ ಮೀಸಲಾತಿ ಅಭಿವೃದ್ಧಿ
*ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣ
* ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿ ರಸ್ತೆ ನಿರ್ಮಾಣ
*ವಿದ್ಯುತ್ ಉಳಿತಾಯಕ್ಕಾಗಿ ಎಲ್ಇಡಿ ಬಲ್ಬ್
*ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ
*22ನೇ ಏಮ್ಸ್ ಹರ್ಯಾಣದಲ್ಲಿ ನಿರ್ಮಾಣವಾಗಲಿದೆ
*50 ಕೋಟಿ ಜನರಿಗೆ ಆಯುಷ್ಮಾನ್ ಭಾರತ್ ಮೂಲಕ ಚಿಕಿತ್ಸೆ