ಕರ್ಕರೆ ಬಗ್ಗೆ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಹೇಳಿಕೆ ಸಂಪೂರ್ಣ ತಪ್ಪು: ದೇವೇಂದ್ರ ಫಡ್ನವೀಸ್
ಮುಂಬೈ, ಎ.27: ಹುತಾತ್ಮ ಪೊಲೀಸ್ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ, ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ನೀಡಿರುವ ಹೇಳಿಕೆ ಸಂಪೂರ್ಣ ತಪ್ಪು ಎಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
“ಕರ್ಕರೆ ಧೈರ್ಯವಂತ ಪೊಲೀಸ್ ಅಧಿಕಾರಿ. ಅವರು ಹೋರಾಡುತ್ತಾ ತಮ್ಮ ಪ್ರಾಣವನ್ನು ದೇಶಕ್ಕೆ ಅರ್ಪಿಸಿದರು. ಇಡೀ ದೇಶವೇ ಅವರನ್ನು ಹುತಾತ್ಮ ಎಂದು ಪರಿಗಣಿಸುತ್ತದೆ. ಅವರಿಗೆ (ಪ್ರಜ್ಞಾ) ಕೆಲ ಸಮಸ್ಯೆಗಳಿತ್ತು ಮತ್ತು ಅದರಿಂದ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳು ಆಕೆಯನ್ನು ನೋಡುತ್ತಿದೆ ಎಂದು ನಾನು ಎಚ್ಚರಿಕೆ ನೀಡಲು ಇಚ್ಛಿಸುತ್ತೇನೆ” ಎಂದವರು ಹೇಳಿದರು.
Next Story