ತ್ರಿಪುರಾದಲ್ಲಿ ಉಪ ಚುನಾವಣೆ: ಬಿಜೆಪಿಗೆ ಜಯ
ಅಗರ್ತಲ, ಸೆ.27: ಪ್ರತಿ ಸ್ಪರ್ಧಿ ಸಿಪಿಐ(ಎಂ)ನ ಬುಲ್ಟಿ ಬಿಸ್ವಾಸ್ರನ್ನು 5,276 ಮತಗಳ ಅಂತರದಿಂದ ಮಣಿಸಿದ ತ್ರಿಪುರಾದ ಆಡಳಿತಾರೂಢ ಬಿಜೆಪಿ ಅಭ್ಯರ್ಥಿ ಮಿಮಿ ಮಂಜುಂದಾರ್ ಬಾಧರ್ಘಾಟ್(ಎಸ್ಸಿ)ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಸಾಧಿಸಿದರು.
ಕಾಂಗ್ರೆಸ್ ಅಭ್ಯರ್ಥಿ ರತನ್ ಚಂದ್ರ ದಾಸ್ ಮೂರನೇ ಸ್ಥಾನ ಪಡೆದರು. ಆದರೆ ಕಳೆದ ವರ್ಷ ಫೆಬ್ರವರಿ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ದಾಸ್ ಅವರ ಮತ ಹಂಚಿಕೆ ಪ್ರಮಾಣ 18 ಪಟ್ಟು ಹೆಚ್ಚಾಗಿದೆ. ಬಿಜೆಪಿ ಶಾಸಕ ದಿಲಿಪ್ ಸರ್ಕಾರ್ ಎಪ್ರಿಲ್ನಲ್ಲಿ ನಿಧನರಾದ ಕಾರಣ ಬಾಧರ್ಘಾಟ್ ಕ್ಷೇತ್ರ ತೆರವಾಗಿದ್ದು, ಸೆ.23ರಂದು ಉಪ ಚುನಾವಣೆ ನಡೆದಿತ್ತು.
Next Story