ಉದ್ಘಾಟನೆಯಾಗಿ ಆರೇ ತಿಂಗಳಲ್ಲಿ ಕುಸಿದ ಮೇಲ್ಸೇತುವೆ !
ಗುರುಗಾಂವ್ : ಉದ್ಘಾಟನೆಯಾದ ಕೇವಲ ಆರು ತಿಂಗಳಲ್ಲೇ ದೆಹಲಿ- ಜೈಪುರ ರೈಲು ಹಳಿಗೆ ನಿರ್ಮಿಸಿರುವ ಮೇಲ್ಸೇತುವೆ ಪಟೌಡಿ ಸಮೀಪ ಭಾಗಶಃ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
2019ರ ಸೆಪ್ಟೆಂಬರ್ನಲ್ಲಿ ಹರ್ಯಾಣ ಲೋಕೋಪಯೋಗಿ ಸಚಿವರು ಈ ಮೇತ್ಸೇತುವೆ ಉದ್ಘಾಟಿಸಿದ್ದರು.
ತಕ್ಷಣಕ್ಕೆ ಯಾವುದೇ ಸಾವು-ನೋವು, ಆಸ್ತಿಪಾಸ್ತಿ ನಷ್ಟದ ವಿವರ ತಿಳಿದುಬಂದಿಲ್ಲ. ನಿರ್ಮಾಣಕ್ಕೆ ಕಳಪೆ ವಸ್ತುಗಳನ್ನು ಬಳಸಿರುವುದು ಮತ್ತು ಅಕಾಲಿಕ ಮಳೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
"ಅಧಿಕಾರಿಗಳು ತೋರಿದ ನಿರ್ಲಕ್ಷ್ಯ ಮೇಲ್ಸೇತುವೆ ಕುಸಿತಕ್ಕೆ ಪ್ರಮುಖ ಕಾರಣ. ಈ ಮೇಲ್ಸೇತುವೆ ನಿರ್ಮಾಣದ ವೇಳೆ ಅಧಿಕಾರಿಗಳು ಈ ಕಡೆ ಮುಖ ಹಾಕಿರಲೂ ಇಲ್ಲ" ಎಂದು ಪಹಾರಿ ಗ್ರಾಮದ ಸರಪಂಚ ಪ್ರದೀಪ್ ಕುಮಾರ್ ಆಪಾದಿಸಿದ್ದಾರೆ.
Next Story