ಸಿಂಧಿಯಾಗೆ ಅಭಿನಂದನೆ ಸಲ್ಲಿಸಿದ ದಿಗ್ವಿಜಯ ಸಿಂಗ್
ಭೋಪಾಲ್, ಮಾ.12: ಬಿಜೆಪಿಯನ್ನು ಸೇರ್ಪಡೆಯಾಗಿರುವ ಜ್ಯೋತಿರಾದಿತ್ಯ ಸಿಂಧಿಯಾಗೆ ಹೃತ್ಪೂರ್ವಕ ವಂದನೆಗಳು. ಬಿಜೆಪಿಯಲ್ಲಿ ದೇವರು ಅವರನ್ನು ಚೆನ್ನಾಗಿಡಲಿ’’ಎಂದು ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಟ್ವೀಟ್ ಮಾಡಿದ್ದಾರೆ.
ಸಿಂಧಿಯಾ ಬುಧವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದು ನನ್ನ ಜೀವನದ ಟರ್ನಿಂಗ್ ಪಾಯಿಂಟ್ ಎಂದು ಹೇಳಿಕೊಂಡಿದ್ದರು.
ಸಿಂಧಿಯಾರನ್ನು ಕಾಂಗ್ರೆಸ್ನಲ್ಲಿ ಮೂಲೆಗುಂಪು ಮಾಡಿರಲಿಲ್ಲ. ಗ್ವಾಲಿಯರ್ನ ಚೆಂಬಲ್ ವಿಭಾಗದ ಯಾವುದೇ ಕಾಂಗ್ರೆಸ್ ನಾಯಕರನ್ನು ವಿಚಾರಿಸಿದರೆ ಈ ವಿಚಾರ ನಿಮಗೆ ಗೊತ್ತಾಗುತ್ತದೆ. ಕಳೆದ 16 ತಿಂಗಳುಗಳಲ್ಲಿ ಈ ಪ್ರದೇಶದಲ್ಲಿ ಅವರ ಅನುಮತಿ ಇಲ್ಲದೆ ಏನೂ ನಡೆದಿರಲಿಲ್ಲ. ಮೋದಿ-ಶಾ ಆಡಳಿತದಲ್ಲಿ ಅವರು ಸುಖವಾಗಿರಲಿ ಎಂದು ಹಾರೈಸುವೆ ಎಂದು ಸಿಂಗ್ ಹೇಳಿದ್ದಾರೆ.
Next Story