ಯೆಸ್ ಬ್ಯಾಂಕ್ ಹಗರಣ: ಉದ್ಯಮಿ ಸುಭಾಷ್ ಚಂದ್ರಗೆ ಈ.ಡಿ.ಯಿಂದ ಬುಲಾವ್
ಹೊಸದಿಲ್ಲಿ,ಮಾ.16: ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಭಾಗಿಯಾಗಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ತನ್ನೆದುರು ಹಾಜರಾಗುವಂತೆ ಉದ್ಯಮಿ ಸುಭಾಷ್ ಚಂದ್ರ ಅವರಿಗೆ ಜಾರಿ ನಿರ್ದೇಶನಾಲಯವು ನಿರ್ದೇಶ ನೀಡಿದೆ.
ಸುಭಾಷ್ ಚಂದ್ರ ಅವರ ಎಸ್ಸೆಲ್ ಗ್ರೂಪ್ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕಿಗೆ 8,000 ಕೋ.ರೂ.ಗೂ ಅಧಿಕ ಸಾಲಬಾಕಿಯನ್ನು ಉಳಿಸಿಕೊಂಡಿದೆ ಎನ್ನಲಾಗಿದೆ.
ಯೆಸ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಅಡಾಗ್ನ ಅನಿಲ ಅಂಬಾನಿ ಮತ್ತು ಅವಂತಾ ಗ್ರೂಪ್ನ ಗೌತಮ ಥಾಪರ್ ಅವರಿಗೂ ಸಮನ್ಸ್ ಜಾರಿಗೊಳಿಸಿರುವ ಈ.ಡಿ.ಗುರುವಾರ ತನ್ನೆದುರು ಹಾಜರಾಗುವಂತೆ ಸೂಚಿಸಿದೆ.
ಅಂಬಾನಿ ಅನಾರೋಗ್ಯದ ಕಾರಣವೊಡ್ಡಿ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ ಈ.ಡಿ.ಅವರಿಗೆ ಮತ್ತೆ ಹೊಸದಾಗಿ ಸಮನ್ಸ್ ಜಾರಿಗೊಳಿಸಿದೆ.
Next Story