ಮರಣದಂಡನೆಯನ್ನು ನಿಲ್ಲಿಸುವಂತೆ ಸದಸ್ಯರಾಷ್ಟ್ರಗಳಿಗೆ ವಿಶ್ವಸಂಸ್ಥೆ ಕರೆ
ವಿಶ್ವಸಂಸ್ಥೆ, ಮಾ.21: ಮರಣ ದಂಡನೆಯನ್ನು ಅಂತ್ಯಗೊಳಿಸುವಂತೆ ಅಥವಾ ಅದನ್ನು ನಿಷೇಧಿಸುವಂತೆ ವಿಶ್ವಸಂಸ್ಥೆಯು ಶನಿವಾರ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದೆ. ಶುಕ್ರವಾರವಷ್ಟೇ ದಿಲ್ಲಿಯ ತಿಹಾರ ಜೈಲಿನಲ್ಲಿ ನಿರ್ಭಯಾ ಅತ್ಯಾಚಾರ-ಕೊಲೆ ಪ್ರಕರಣದ ನಾಲ್ವರು ದೋಷಿಗಳನ್ನು ಗಲ್ಲಿಗೇರಿಸಲಾಗಿತ್ತು.
ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರ ವಕ್ತಾರ ಸ್ಟೆಫಾನ್ ದುಜಾರಿಕ್ ಅವರು,ನಮ್ಮ ನಿಲುವು ಸ್ಪಷ್ಟವಿದೆ. ಮರಣ ದಂಡನೆ ವಿಧಿಸುವುದನ್ನು ನಿಲ್ಲಿಸುವಂತೆ ಅಥವಾ ಅದನ್ನು ಕನಿಷ್ಠ ನಿಷೇಧಿಸುವಂತೆ ನಾವು ಎಲ್ಲ ಸದಸ್ಯ ರಾಷ್ಟ್ರಗಳಿಗೆ ಕರೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
Next Story