ಉ.ಪ್ರದೇಶ: ಹಾಡಹಗಲೇ ಜನರ ಮುಂದೆ ಸಮಾಜವಾದಿ ಪಕ್ಷದ ನಾಯಕ, ಪುತ್ರನ ಗುಂಡಿಕ್ಕಿ ಹತ್ಯೆ
ಭಯಾನಕ ಘಟನೆಯ ವಿಡಿಯೋ ವೈರಲ್
ಲಕ್ನೋ: ಹಾಡಹಗಲೇ ಜನರ ಮುಂದೆಯೇ ಸಮಾಜವಾದಿ ಪಕ್ಷದ ಸ್ಥಳೀಯ ನಾಯಕ ಮತ್ತು ಪುತ್ರನನ್ನು ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ನಡೆದಿದ್ದು, ಈ ಭಯಾನಕ ಘಟನೆಯ ವಿಡಿಯೋ ವೈರಲ್ ಆಗಿದೆ.
ಲಕ್ನೋದಿಂದ 379 ಕಿ.ಮೀ. ದೂರದ ಸಂಭಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನ್ರೇಗಾದಡಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ನಡೆದ ವಾಗ್ವಾದದ ನಂತರ ಈ ಘಟನೆ ನಡೆದಿದೆ ಎನ್ನಲಾಗಿದೆ.
ರಸ್ತೆ ನಿರ್ಮಾಣ ವೀಕ್ಷಿಸಲು ಎಸ್ಪಿ ನಾಯಕ ಚೋಟೆ ಲಾಲ್ ದಿವಾಕರ್ ಮತ್ತು ಪುತ್ರ ಹೋಗಿದ್ದರು. ಈ ಸಂದರ್ಭ ಅಲ್ಲಿದ್ದ ಇಬ್ಬರು ಸ್ಥಳೀಯರು ರಸ್ತೆ ನಿರ್ಮಾಣ ವಿಚಾರವಾಗಿ ವಾಗ್ವಾದಕ್ಕಿಳಿದಿದ್ದಾರೆ. ಈ ಇಬ್ಬರು ರೈಫಲ್ ಗಳನ್ನು ಹಿಡಿದಿದ್ದರು. ಮಾತಿಕ ಚಕಮಕಿ ತೀವ್ರವಾಗುತ್ತಿದ್ದಂತೆ ಇಬ್ಬರು ತಂದೆ ಮಗನ ಮೇಲೆ ಇದ್ದಕ್ಕಿದ್ದಂತೆ ಗುಂಡು ಹಾರಿಸಿದ್ದಾರೆ. ಗುಂಡಿನ ಏಟಿಗೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
#LiveVideo#संभल में सपा नेता छोटेलाल दिवाकर और उनके बेटे की जमीनी विवाद में गोली मारकर सरेआम हत्या, आरोपी मौजूदा ग्रामप्रधान का पति है, फिलहाल फरार है@Uppolice pic.twitter.com/lZqUpUwr2Y
— Narendra (@hindipatrakar) May 19, 2020