ಬಾಡಿಗೆ ಕೇಳಿದ್ದಕ್ಕೆ ಜೊತೆಗಿದ್ದ ಇಬ್ಬರನ್ನು ಇರಿದು ಕೊಂದ ಯುವಕ
ಹೊಸದಿಲ್ಲಿ, ಸೆ.1: ಬಾಡಿಗೆಯ ಪಾಲು ನೀಡಲು ಒತ್ತಾಯಿಸಿದ ಇಬ್ಬರು ಕೊಠಡಿ ಸಹವಾಸಿ(ರೂಂಮೇಟ್ಸ್)ಗಳನ್ನು ಯುವಕನೋರ್ವ ಹತ್ಯೆ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ.
23 ವರ್ಷದ ಶಾಕಿರ್ ಎಂಬಾತ ಆರೋಪಿ. ಈತ ಇತರ ಇಬ್ಬರೊಂದಿಗೆ ದಿಲ್ಲಿಯ ರಘುಬೀರ್ ನಗರದಲ್ಲಿ ಬಾಡಿಗೆ ಕೋಣೆಯಲ್ಲಿ ತಂಗಿದ್ದು ಇತ್ತೀಚೆಗೆ ಊರಿಗೆ ತೆರಳಿದ್ದವ ನಾಲ್ಕು ತಿಂಗಳ ಬಳಿಕ ದಿಲ್ಲಿಗೆ ಹಿಂತಿರುಗಿ ಮತ್ತೆ ತನ್ನ ಬಾಡಿಗೆ ಕೊಠಡಿಗೆ ಬಂದಿದ್ದ. ಈ ಸಂದರ್ಭ ಕೊಠಡಿ ಸಹವಾಸಿಗಳಾದ ಅಮೀರ್ ಹಸನ್ ಮತ್ತು ಅಝಂ, ಊರಿನಲ್ಲಿದ್ದ ಸಂದರ್ಭದ (4 ತಿಂಗಳ) ಬಾಡಿಗೆಯನ್ನೂ ಪಾವತಿಸಬೇಕು ಎಂದು ತಗಾದೆ ಮಾಡಿದ್ದರು. ಈ ಸಂದರ್ಭ ಮಾತಿನ ಚಕಮಕಿ ನಡೆದು , ಸಾಕಿರ್ನನ್ನು ನಿಂದಿಸಿದ್ದರು ಎನ್ನಲಾಗಿದೆ.
ಇದರಿಂದ ಕೆರಳಿದ್ದ ಸಾಕಿರ್, ಆಗಸ್ಟ್ 30ರ ಮಧ್ಯರಾತ್ರಿ, ಇಬ್ಬರು ನಿದ್ದೆಯಲ್ಲಿದ್ದಾಗ ಚೂರಿಯಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದು, ಆರೋಪಿಯನ್ನು ಆತನ ಹುಟ್ಟೂರು ಉತ್ತರಪ್ರದೇಶದ ಅಮ್ರೋಹಾದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ವರದಿಯಾಗಿದೆ.
Next Story