ಪೊಳ್ಳು ಘೋಷಣೆ ಬೇಡ, ಕೆಲಸ ಕೊಡಿ: ರಾಹುಲ್
ಹೊಸದಿಲ್ಲಿ, ಸೆ.2: ಕೇಂದ್ರ ಸರಕಾರ ವಿದ್ಯಾರ್ಥಿಗಳ ವಾಸ್ತವಿಕ ಸಮಸ್ಯೆಗಳನ್ನು ಕಡೆಗಣಿಸಿ ಕೇವಲ ಪೊಳ್ಳು ಘೋಷಣೆಯಲ್ಲೇ ಕಾಲ ಕಳೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟೀಕಿಸಿದ್ದಾರೆ.
“ಭಾರತದ ಭವಿಷ್ಯವನ್ನು ಮೋದಿ ಸರಕಾರ ಗಂಡಾಂತರಕ್ಕೆ ನೂಕುತ್ತಿದೆ. ಜೆಇಇ- ನೀಟ್ ಪರೀಕ್ಷೆ ಬರೆಯಲು ಆಸಕ್ತ ವಿದ್ಯಾರ್ಥಿಗಳ, ಸಿಬ್ಬಂದಿ ನೇಮಕಾತಿ ಅಯೋಗ ಹಾಗೂ ಇತರ ಸರಕಾರಿ ಉದ್ಯೋಗದ ನೇಮಕಾತಿಯ ಪರೀಕ್ಷೆ ಬರೆಯುವವರ ಬೇಡಿಕೆಗಳನ್ನು ಸರಕಾರ ನಿರ್ಲಕ್ಷಿಸಿ ದಾಷ್ಟ್ಯ ಮೆರೆದಿದೆ” ಎಂದು ರಾಹುಲ್ ಟೀಕಿಸಿದ್ದಾರೆ.
Next Story