ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ, ಕೊಲೆಯೆಂದು ವೈದ್ಯರ ಮಾಹಿತಿ : ವಕೀಲರ ಹೇಳಿಕೆ
ಹೊಸದಿಲ್ಲಿ, ಸೆ.25: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಆತ್ಮಹತ್ಯೆ ಕಾರಣವಲ್ಲ. ಅವರ ಕತ್ತು ಹಿಸುಕಿ ಕೊಲೆ ಮಾಡಿರುವುದರಲ್ಲಿ ಸಂಶಯವಿಲ್ಲ ಎಂದು ಎಐಐಎಂಎಸ್ನ ವೈದ್ಯರು ಈ ಹಿಂದೆಯೇ ತನಗೆ ಮಾಹಿತಿ ನೀಡಿದ್ದರು ಎಂದು ಸುಶಾಂತ್ ಸಿಂಗ್ರ ಕುಟುಂಬದ ವಕೀಲರು ಹೇಳಿದ್ದಾರೆ. ಸುಶಾಂತ್ ಸಿಂಗ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಸಂದರ್ಭದ ಫೋಟೊವನ್ನು ತಾನು ವೈದ್ಯರಿಗೆ ಕಳುಹಿಸಿದ್ದೆ. ಫೋಟೊ ನೋಡಿದರೆ ಸುಶಾಂತ್ ರನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು 200 ಶೇ.ದಷ್ಟು ಸ್ಪಷ್ಟವಾಗುತ್ತದೆಂದು ವೈದ್ಯರು ಪ್ರತಿಕ್ರಿಯಿಸಿದ್ದರು ಎಂದು ವಕೀಲರು ಟ್ವೀಟ್ ಮಾಡಿದ್ದಾರೆ. ಸುಶಾಂತ್ ಸಿಂಗ್ ಪ್ರಕರಣದ ಬಗ್ಗೆ ನಿರ್ಧಾರಕ್ಕೆ ಬರುವಲ್ಲಿ ಸಿಬಿಐ ತೋರುತ್ತಿರುವ ವಿಳಂಬ ಧೋರಣೆಯಿಂದ ನಿರಾಶೆಯಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಎಂದು ದಾಖಲಾಗಿರುವ ಪ್ರಕರಣವನ್ನು ಸುಶಾಂತ್ ಸಿಂಗ್ ಕೊಲೆ ಎಂದು ಬದಲಾಯಿಸಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ.
Next Story