ಈಗ ಅರ್ನಬ್ ಬೆನ್ನು ಬಿದ್ದ ಇತರ ಟಿವಿ ಚಾನಲ್ ರಿಪೋರ್ಟರ್ ಗಳು
ಮುಂಬೈ : ಟಿ ಆರ್ ಪಿ ತಿರುಚಿದ ಆರೋಪ ಎದುರಿಸುತ್ತಿರುವ ರಿಪಬ್ಲಿಕ್ ವಾಹಿನಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ತಮ್ಮ ನಿವಾಸದಿಂದ ತಮ್ಮ ವಾಹನದಲ್ಲಿ ಗುರುವಾರ ಹೊರ ಸಾಗುತ್ತಿದ್ದಂತೆಯೇ ಇತರ ಪತ್ರಕರ್ತರು ಅವರನ್ನು ಬೆಂಬತ್ತುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಿಪಬ್ಲಿಕ್ ಟಿವಿ ರಿಪೋರ್ಟರ್ಗಳು ಸಾಮಾನ್ಯವಾಗಿ ಹೀಗೆ ಮಾಡುತ್ತಿದ್ದರೆ ಈ ಬಾರಿ ಇಂತಹ ಪರಿಸ್ಥಿತಿಯನ್ನೆದುರಿಸುವ ಸರದಿ ಆ ವಾಹನಿಯ ಮುಖ್ಯ ಸಂಪಾದಕರಿಗೇ ಎದುರಾಗಿ ಬಿಟ್ಟಿದೆ.
ರಿಪಬ್ಲಿಕ್ ಹಾಗೂ ಇತರ ಎರಡು ವಾಹಿನಿಗಳು ಟಿ ಆರ್ ಪಿ ತಿರುಚಲು ಯತ್ನಿಸಿವೆ ಎಂದು ಮುಂಬೈ ಪೊಲೀಸರು ಗುರುವಾರ ಹೇಳಿಕೆ ನೀಡಿದ ಬೆನ್ನಿಗೇ ರಿಪಬ್ಲಿಕ್ ಹಾಗೂ ಇಂಡಿಯಾ ಟುಡೆ ಟಿವಿ ವಾಹಿನಿಗಳು ಆರೋಪ ಪ್ರತ್ಯಾರೋಪಗಳನ್ನು ಹೊರಿಸಿದ್ದವು.
ಈ ಹಿನ್ನೆಲೆಯಲ್ಲಿ ಅರ್ನಬ್ ಅವರಿಂದ ಪ್ರತಿಕ್ರಿಯೆಗಳನ್ನು ಪಡೆಯಲು ಪತ್ರಕರ್ತರು ಅವರ ಕಾರನ್ನು ಸುತ್ತುವರಿದ ಸಂದರ್ಭ 'ಇಂಡಿಯಾ ಟುಡೇ' ಪತ್ರಕರ್ತ ಮುಸ್ತಾಫ ಶೇಖ್ ಅವರನ್ನು ಅರ್ನಬ್ ಅವರ ಭದ್ರತಾ ಸಿಬ್ಬಂದಿ ದೂರ ತಳ್ಳಲು ಯತ್ನಿಸಿದ್ದರೆಂದೂ 'ಇಂಡಿಯಾ ಟುಡೆ' ಆರೋಪಿಸಿದೆ.
— El Kannadiga (@ProKannada) October 9, 2020