ಜೆಡಿಯು ರ್ಯಾಲಿಯಲ್ಲಿ ಲಾಲೂ ಪ್ರಸಾದ್ ಜಿಂದಾಬಾದ್ ಘೋಷಣೆ: ನಿತೀಶ್ ಕುಮಾರ್ ಕೆಂಡಾಮಂಡಲ
ಹೊಸದಿಲ್ಲಿ: ಮುಂದಿನ ವಾರ ಆರಂಭವಾಗಲಿರುವ ಚುನಾವಣೆಗೆ ಬಿಹಾರದ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ರ್ಯಾಲಿಗೆ ಜನರು ಕಿಕ್ಕಿರಿದ ಸೇರುತ್ತಿರುವ ಫೊಟೊಗಳು ವೈರಲ್ ಆಗುತ್ತಿದೆ. ಆರ್ ಜೆಡಿ ನಾಯಕ ಪ್ರತಿ ರ್ಯಾಲಿಯಲ್ಲಿಯೂ 10 ಲಕ್ಷ ಸರಕಾರಿ ನೌಕರಿ ಸೃಷ್ಟಿಸುವ ಭರವಸೆ ನೀಡುತ್ತಿದ್ದಾರೆ. ಇಂದು ವಿಭಿನ್ನ ವೀಡಿಯೊವೊಂದು ಕಾಣಿಸಿಕೊಂಡಿದ್ದು, ನಿತೀಶ್ ಕುಮಾರ್ ರ್ಯಾಲಿಯಲ್ಲಿ 'ಲಾಲು ಯಾದವ್ ಜಿಂದಾಬಾದ್' ಎಂಬ ಘೋಷಣೆ ಮೊಳಗಿದ್ದು, ಇದರಿಂದ ಬಿಹಾರ ಸಿಎಂ ಕೆಂಡಾಮಂಡಲವಾದರು.
"ನೀವೇನು ಹೇಳುತ್ತಿದ್ದೀರಿ'' ಎಂದು ಎರಡು ಬಾರಿ ಕೇಳಿದ ನಿತೀಶ್ ಕುಮಾರ್, "ನೀವು ಇಲ್ಲಿ ಅವ್ಯವಸ್ಥೆ ಮಾಡಬೇಡಿ. ನಿಮಗೆ ನನಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ಹಾಕಬೇಡಿ. ನೀವು ಇಲ್ಲಿಗೆ ಬಂದು ಮತ ಹಾಕಲು ಬಯಸುವವರ ಮನಸ್ಸು ಕೆಡಿಸಬೇಡಿ. ಇಂತಹ ಅಸಂಬದ್ಧತೆ ನಿಲ್ಲಿಸಿ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿತೀಶ್ ಕುಮಾರ್ ಅವರು ಲಾಲೂಪ್ರಸಾದ್ ಅವರ ಆಪ್ತ, ಇತ್ತೀಚೆಗೆ ಜೆಡಿಯುಗೆ ಸೇರ್ಪಡೆಯಾಗಿರುವ ಚಂದ್ರಿಕಾ ರಾಯ್ ಪರ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.