ತೆಲಂಗಾಣ: ಕೋವಿಡ್-19 ಲಸಿಕೆ ಸ್ವೀಕರಿಸಿದ ಆರೋಗ್ಯ ಕಾರ್ಯಕರ್ತ ಮೃತ್ಯು
ಸಾವಿಗೂ-ಲಸಿಕೆಗೂ ಸಂಬಂಧವಿದ್ದಂತೆ ಕಾಣುತ್ತಿಲ್ಲ ಎಂದ ಆರೋಗ್ಯಾಧಿಕಾರಿ
ಹೈದರಾಬಾದ್: ಕೋವಿಡ್-19 ಲಸಿಕೆ ಸ್ವೀಕರಿಸಿದ್ದ ತೆಲಂಗಾಣದ ನಿರ್ಮಲಾ ಜಿಲ್ಲೆಯ 42ರ ವಯಸ್ಸಿನ ಆರೋಗ್ಯ ಕಾರ್ಯಕರ್ತ ಇಂದು ಬೆಳಗ್ಗಿನ ಜಾವ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಸಾವಿಗೆ ಲಸಿಕೆ ಪಡೆದಿರುವುದು ಕಾರಣವಲ್ಲ ಎನ್ನುವ ಅಂಶ ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಕಾರ್ಯಕರ್ತನಿಗೆ ಮಂಗಳವಾರ ಬೆಳಗ್ಗೆ 11:30ಕ್ಕೆ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಗಿತ್ತು. ಇಂದು ಬೆಳಗ್ಗಿನ ಜಾವ 2:30ಕ್ಕೆ ಎದೆ ನೋವು ಕಾಣಿಸಿಕೊಂಡಿತ್ತು. ಬೆಳಗ್ಗೆ 5:30ಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿದ್ದರು ಎಂದು ಸಾರ್ವಜನಿಕ ಆರೋಗ್ಯ ನಿರ್ದೇಶಕ ಜಿ.ಶ್ರೀನಿವಾಸ್ ರಾವ್ ಪತ್ರಿಕಾ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ವರದಿಯ ಪ್ರಕಾರ ವ್ಯಕ್ತಿಯ ಸಾವಿಗೆ ಲಸಿಕೆ ಕಾರಣ ಎಂಬುದು ಪತ್ತೆಯಾಗಿಲ್ಲ. ಮಾರ್ಗಸೂಚಿಗಳ ಪ್ರಕಾರ ವೈದ್ಯರ ತಂಡವೊಂದು ಶವ ಪರೀಕ್ಷೆ ನಡೆಸಿದೆ ಎಂದು ರಾವ್ ತಿಳಿಸಿದರು.
Next Story