ಕೃಷಿ ಕಾನೂನುಗಳನ್ನು ವಿರೋಧಿಸಿ ಶಾಸಕ ಸ್ಥಾನ ತ್ಯಜಿಸಿದ ಅಭಯ್ ಚೌಟಾಲ
ಹೊಸದಿಲ್ಲಿ: ಇಂಡಿಯನ್ ನ್ಯಾಶನಲ್ ಲೋಕದಳ(ಐಎನ್ಎಲ್ಡಿ)ಪಕ್ಷದ ಏಕೈಕ ಶಾಸಕ ಅಭಯ್ ಸಿಂಗ್ ಚೌಟಾಲ ಹರ್ಯಾಣ ವಿಧಾನಸಭೆಯ ಶಾಸಕ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಗಣರಾಜ್ಯೋತ್ಸವ ದಿನ ಕೇಂದ್ರ ಸರಕಾರವು ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯದಿದ್ದರೆ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಪ್ರಕಟಿಸಿದ ಎರಡು ವಾರಗಳ ಬಳಿಕ ನುಡಿದಂತೆ ನಡೆದುಕೊಂಡಿದ್ದಾರೆ.
ಎಲ್ಲೆನಾಬಾದ್ನಿಂದ ಮೂರು ಬಾರಿ ಶಾಸಕನಾಗಿರುವ ಚೌಟಾಲ ಕ್ಷೇತ್ರದಲ್ಲಿ ರೈತರ ಪ್ರಾಬಲ್ಯ ಅಧಿಕವಿದೆ. ಹಸಿರುಬಣ್ಣದ ಟ್ರಾಕ್ಟರ್ ಏರಿ ರಾಜ್ಯ ವಿಧಾನಸಭೆಗೆ ತೆರಳಿದ ಚೌಟಾಲ ತನ್ನ ರಾಜೀನಾಮೆ ಸಲ್ಲಿಸಿದರು.
Next Story