ಉತ್ತರ ಪ್ರದೇಶ: ರೈತರ ಮಹಾಪಂಚಾಯತ್ಗೆ ಜಿಲ್ಲಾಡಳಿತದಿಂದ ಅನುಮತಿ ನಿರಾಕರಣೆ
ಶಾಮ್ಲಿ (ಉತ್ತರಪ್ರದೇಶ), ಫೆ. 4: ಉತ್ತರಪ್ರದೇಶದ ಶಾಮ್ಲಿಯಲ್ಲಿ ಫೆಬ್ರವರಿ 5ರಂದು ರೈತರ ಮಹಾಪಂಚಾಯತ್ (ಸಭೆ) ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಅಲ್ಲದೆ, ಎಪ್ರಿಲ್ 3ರ ವರೆಗೆ ಬೃಹತ್ ಸಭೆ ನಡೆಸುವುದಕ್ಕೆ ಕೂಡ ನಿಷೇಧ ಹೇರಿದೆ.
ಜಿಲ್ಲಾಡಳಿತ ಅನುಮತಿ ನಿರಾಕರಿಸಿರುವ ಹೊರತಾಗಿಯೂ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಮಹಾಪಂಚಾಯತ್ ಮುಂದುವರಿಸಲು ಆಯೋಜಕರಾಗಿರುವ ಭಾರತೀಯ ಕಿಸಾನ್ ಒಕ್ಕೂಟ, ರಾಷ್ಟ್ರೀಯ ಲೋಕ ದಳ ಹಾಗೂ ಇತರ ಸಂಘಟನೆಗಳು ನಿರ್ಧರಿಸಿವೆ.
ಕೃಷಿ ಕಾಯ್ದೆಗಳ ಕುರಿತಂತೆ ದಿಲ್ಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ಕೇಂದ್ರ ಸರಕಾರದ ನಡುವೆ ಬಿಕ್ಕಟ್ಟು ಮುಂದುವರಿದಿರುವಂತೆಯೇ ಹಲವು ರಾಜ್ಯಗಳಲ್ಲಿ ಮಹಾಪಂಚಾಯತ್ ನಡೆಯುತ್ತಿದೆ.
Next Story