ಚೀನಾಗಿಂತ ಹೆಚ್ಚು ಬಾರಿ ಭಾರತ ಅತಿಕ್ರಮಣ ನಡೆಸಿದೆ ಎಂದು ಹೇಳಿಕೆ ನೀಡಿದ ಕೇಂದ್ರ ಸಚಿವ: ರಾಹುಲ್ ಗಾಂಧಿ ಆಕ್ರೋಶ
ಹೊಸದಿಲ್ಲಿ: ಚೀನಾಗಿಂತಲೂ ಹೆಚ್ಚು ಬಾರಿ ಭಾರತ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಸಮೀಪ ಅತಿಕ್ರಮಣ ನಡೆಸಿದೆ ಎಂಬ ಹೇಳಿಕೆ ನೀಡಿದ ಕೇಂದ್ರ ಸಚಿವ ವಿ.ಕೆ ಸಿಂಗ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಸಿಂಗ್ ಅವರು ತಮ್ಮ ಹೇಳಿಕೆಯಿಂದ ಚೀನಾಗೆ ಸಹಾಯ ಮಾಡಿದಂತಾಗಿದೆ ಎಂದು ರಾಹುಲ್ ಟ್ವೀಟ್ ಮೂಲಕ ಹೇಳಿದ್ದಾರೆ.
"ಬಿಜೆಪಿ ಸಚಿವರೊಬ್ಬರು ಭಾರತದ ವಿರುದ್ಧ ಚೀನಾಗೆ ಸಹಾಯ ಮಾಡುವಂತ ಹೇಳಿಕೆ ಏಕೆ ನೀಡಬೇಕು? ಅವರನ್ನು ವಜಾಗೊಳಿಸಬೇಕು. ಹಾಗೆ ಮಾಡದೇ ಇದ್ದರೆ ಅದು ಪ್ರತಿಯೊಬ್ಬ ಭಾರತೀಯ ಜವಾನನಿಗೆ ಮಾಡಿದ ಅವಮಾನ" ಎಂದು ರಾಹುಲ್ ತಮ್ಮ ಟ್ವೀಟ್ನಲ್ಲಿ ಹೇಳಿದ್ದಾರೆ.
"ಚೀನಾಕ್ಕಿಂತಲೂ ಹೆಚ್ಚು ಬಾರಿ ಭಾರತ ವಾಸ್ತವಿಕ ಗಡಿ ನಿಯಂತ್ರಣ ರೇಖೆಯಾಚೆ ಅತಿಕ್ರಮಣ ನಡೆಸಿದೆ ಆದರೆ ಇದನ್ನು ಸರಕಾರ ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ, ಚೀನಾ ಹತ್ತು ಬಾರಿ ಅತಿಕ್ರಮಣಗೈದಿದ್ದರೆ ನಾವು ಕನಿಷ್ಠ 50 ಬಾರಿ ಮಾಡಿರಬಹುದು" ಎಂದು ಮಾಜಿ ಸೇನಾಧಿಕಾರಿಯೂ ಆಗಿರುವ ಸಿಂಗ್ ರವಿವಾರ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದ್ದರು.
Why is a BJP minister helping China make a case against India?
— Rahul Gandhi (@RahulGandhi) February 9, 2021
He should’ve been sacked.
Not sacking him means insulting every Indian Jawan. pic.twitter.com/8NK5nCJTG4