ಉತ್ತರಪ್ರದೇಶ: ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡವನಿಂದ ಗಾಂಧೀಜಿ ಪ್ರತಿಮೆ ಧ್ವಂಸ; ಕ್ರಮಕ್ಕೆ ಆಗ್ರಹ
ವೀಡಿಯೋ ವೀಕ್ಷಿಸಿ
ಮೀರತ್: ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಸುತ್ತಿಗೆಯಿಂದ ಒಡೆದು ಧ್ವಂಸ ಮಾಡಿದ ಘಟನೆಯು ಉತ್ತರಪ್ರದೇಶದ ಮೀರತ್ ನಲ್ಲಿ ನಡೆದಿದೆ. ಆರೋಪಿಯು ಗಾಂಧಿ ಪ್ರತಿಮೆಯನ್ನು ಒಡೆಯುವ ದೃಶ್ಯವನ್ನು ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದಾನೆ.
ತಾನು ಬಿಜೆಪಿ ಪಕ್ಷದ ಸದಸ್ಯನೆಂದು ಹೇಳಿಕೊಂಡಿದ್ದ ವ್ಯಕ್ತಿಯು ತನ್ನ ಟ್ವಿಟರ್ ಖಾತೆಯಲ್ಲಿ ʼನಾಥೂರಾಮ್ ಗೋಡ್ಸೆ ಝಿಂದಾಬಾದ್ʼ ಎಂಬ ತಲೆಬರಹದಡಿ ಈ ವೀಡಿಯೋವನ್ನು ಪ್ರಕಟಿಸಿದ್ದಾನೆ. ಈತ ಈ ಹಿಂದೆ ನರೇಂದ್ರ ಮೋದಿ ವಿಷ್ಣುವಿನ ಅವತಾರ ಎಂದು ಚಿತ್ರಿಸಿರುವ ಫೋಟೊ ಕೂಡಾ ಸಾಮಾಜಿಕ ತಾಣದಾದ್ಯಂತ ಹರಿದಾಡುತ್ತಿದೆ.
ಈ ಕುರಿತಾದಂತೆ ಉತ್ತರ ಪ್ರದೇಶ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಟ್ವಿಟರ್ ಮೂಲಕ ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ಸೇರಿದಂತೆ ಹಲವರು ಆಗ್ರಹಿಸಿದ್ದಾರೆ. ಈ ನಡುವೆ ಈತನ ಇಂತಹಾ ಕೃತ್ಯಗಳ ಕುರಿತು ಈ ಹಿಂದೆ ಪೊಲೀಸರ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.
Hello @meerutpolice @Uppolice, The guy 'claims' to be BJP member from Meerut. He has also shared his contact details on twitter. https://t.co/6DiNPHCoGZ
— Mohammed Zubair (@zoo_bear) March 4, 2021