ತೆಲಂಗಾಣ ಎಂಎಲ್ಸಿ ಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ ಪಿ.ವಿ ನರಸಿಂಹರಾವ್ ಪುತ್ರಿ
ಫೈಲ್ ಫೋಟೊ: ANI
ಹೈದಾರಾದ್, ಮಾ. 21: ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಪುತ್ರಿ ಹಾಗೂ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನ ಅಭ್ಯರ್ಥಿಯಾಗಿದ್ದ ಎಸ್. ವಾಣಿ ದೇವಿ ಅವರು ತೆಲಂಗಾಣ ವಿಧಾನ ಪರಿಷತ್ನ ಮೆಹಬೂಬ್ ನಗರ -ರಂಗಾರೆಡ್ಡಿ-ಹೈದರಾಬಾದ್ ಪದವೀಧರ ಕ್ಷೇತ್ರದಿಂದ ಶನಿವಾರ ಆಯ್ಕೆಯಾಗಿದ್ದಾರೆ.
ವಾಣಿ ದೇವಿ ಅವರು ತನ್ನ ಸಮೀಪದ ಬಿಜೆಪಿ ಪ್ರತಿಸ್ಪರ್ಧಿ ಹಾಗೂ ಹಾಲಿ ಎಂಎಲ್ಸಿ ಎನ್. ರಾಮಚಂದ್ರ ರಾವ್ ಅವರನ್ನು ಸೋಲಿಸಿದ್ದಾರೆ. ಅವರು ಶನಿವಾರ ರಾತ್ರಿ ಚುನಾವಣಾ ಅಧಿಕಾರಿಯಿಂದ ಆಯ್ಕೆಯಾದ ಬಗ್ಗೆ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಹಬೂಬ್ನಗರ-ರಂಗಾರೆಡ್ಡಿ-ಹೈದರಾಬಾದ್ ಹಾಗೂವಾರಂಗಲ್- ಖಮ್ಮಮ್ -ನಲಗೊಂಡ ಪದವೀಧರ ಕ್ಷೇತ್ರಕ್ಕೆ ಮಾರ್ಚ್ 14ರಂದು ಚುನಾವಣೆ ನಡೆಸಲಾಗಿತ್ತು.
Next Story