ದೇಶದ್ರೋಹ ಪ್ರಕರಣ: ಆಯಿಶಾ ಸುಲ್ತಾನಾಗೆ ಮಧ್ಯಂತರ ಜಾಮೀನು ನೀಡಿದ ಕೇರಳ ಹೈಕೋರ್ಟ್
ಕೊಚ್ಚಿ: ಲಕ್ಷದ್ವೀಪದ ಆಡಳಿತಾಧಿಕಾರಿಯನ್ನ ʼಕೇಂದ್ರ ಸರಕಾರ ಸ್ಥಾಪಿಸಿದ ಜೈವಿಕ ಅಸ್ತ್ರʼ ಎಂದಿದ್ದಕ್ಕೆ ಸಿನಿಮಾ ನಿರ್ಮಾಪಕಿ ಹಾಗೂ ನಟಿ ಆಯಿಶಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿತ್ತು. ಈ ಕುರಿತಾದಂತೆ ಆಯಿಶಾ ಕೇರಳ ಹೈಕೋರ್ಟ್ ಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಒಂದು ವಾರಗಳ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ ಎಂದು ತಿಳಿದು ಬಂದಿದೆ.
ಆಯಿಶಾ 41ಎ ಸಿಆರ್ಪಿಸಿ ನೋಟಿಸ್ ಪ್ರಕಾರ ಪೊಲೀಸ್ ವಿಚಾರಣೆಗಾಗಿ ಹಾಜರಾಗಬೇಕು ಎಂದು ಹೇಳಿದೆ.
Next Story