ಉತ್ತರಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದ ಬಿಜೆಪಿಗೆ ಸೈನಾ ನೆಹ್ವಾಲ್ ಅಭಿನಂದನೆ
ರಾಷ್ಟ್ರೀಯ ಲೋಕದಳ ಅಧ್ಯಕ್ಷ ಜಯಂತ್ ಚೌಧರಿ ತೀಕ್ಷ್ಣ ಪ್ರತಿಕ್ರಿಯೆ
ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ 75 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಗೆದ್ದುಕೊಂಡಿತ್ತು.
''ಜಿಲ್ಲಾ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಯೋಗಿ ಆದಿತ್ಯನಾಥ್ ರಿಗೆ ಹೃತ್ಪೂರ್ವಕ ಅಭಿನಂದನೆಗಳು" ಎಂದು ದಿಲ್ಲಿ ವಿಧಾನಸಭಾ ಚುನಾವಣೆಗೆ ಮೊದಲು ಕಳೆದ ವರ್ಷದ ಜನವರಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿರುವ ಸೈನಾ ಟ್ವೀಟ್ ಮಾಡಿದ್ದಾರೆ.
ಸೈನಾ ಟ್ವೀಟ್ ಗೆ ವಿರೋಧ ಪಕ್ಷಗಳು ತೀಕ್ಷ್ಣವಾದ ಪ್ರತಿಕ್ರಿಯೆ ವ್ಯಕ್ತಪಡಿಸಿವೆ.
ರಾಷ್ಟ್ರೀಯ ಲೋಕದಳ ಅಧ್ಯಕ್ಷ ಜಯಂತ್ ಚೌಧರಿ ಅವರು ಸೈನಾರನ್ನು ''ಸರ್ಕಾರಿ ಶಟ್ಲರ್" ಎಂದು ಕರೆದಿದ್ದಾರೆ.
ಜಾತ್ಯತೀತತೆಯು ನಿಮ್ಮ ಅಭಿಮಾನಿಗಳಲ್ಲಿ ವಿಭಜನೆ ಉಂಟು ಮಾಡಿದೆ. ನೀವು ಆಟವಾಡುವುದನ್ನು ಏಕೆ ನಿಲ್ಲಿಸುತ್ತೀರಿ? ಎಂದು ತಮಿಳುನಾಡು ಕಾಂಗ್ರೆಸ್ ನ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಡಾ.ಜೆ. ಅಸ್ಲಾಮ್ ಬಾಷಾ ಅವರು ಸೈನಾ ಅವರ ಟ್ವೀಟನ್ನು ಟ್ಯಾಗ್ ಮಾಡಿ ಟ್ವೀಟಿಸಿದ್ದಾರೆ.
Hearty congratulations for thumping victory in Zila Panchayat Chairperson election in UP @myogiadityanath sir #ZilaPanchayatElectionUP2021
— Saina Nehwal (@NSaina) July 3, 2021
सरकारी shuttler recognises BJP skill in smashing peoples’ verdict!
— Jayant Chaudhary (@jayantrld) July 3, 2021
I think voters need to play a subtle drop shot on celebs trying to influence their decisions! https://t.co/6rlxDk5I6L
Secularism has caused division among your fans .. Why are you going to stop playing? @NSaina ?@ShayarImran @vidyarthee @MastanValiINC https://t.co/mVGNR84BGR
— Dr. J Aslam Basha (@JAslamBasha) July 4, 2021