ಕನ್ವಾರ್ ಯಾತ್ರೆಗೆ ಉತ್ತರ ಪ್ರದೇಶ ಸರಕಾರದಿಂದ ಅನುಮತಿ ಸಾಧ್ಯತೆ
ಲಕ್ನೋ, ಜು. 7: ರಾಜ್ಯದಲ್ಲಿ ಜುಲೈ 25ರಿಂದ ನಡೆಯಲಿರುವ ವಾರ್ಷಿಕ ಕನ್ವಾರ್ ಯಾತ್ರೆಗೆ ಅನುಮತಿ ನೀಡಲು ಉತ್ತರಪ್ರದೇಶ ಸರಕಾರ ನಿರ್ಧರಿಸಿದೆ.
ಕೋವಿಡ್ ಶಿಷ್ಟಾಚಾರದ ಅನುಸರಣೆಯ ಖಾತ್ರಿಯೊಂದಿಗೆ ಯಾತ್ರೆ ನಡೆಸಲು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸುವಂತೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
‘‘ಕನ್ವಾರ್ ಯಾತ್ರೆ ಜುಲೈ 25ರಿಂದ ಆರಂಭವಾಗಲಿದೆ. ಬಿಹಾರದಲ್ಲಿ ಕೂಡ ಯಾತ್ರಿಗಳು ಸಂಚರಿಸುವುದರಿಂದ ಬಿಹಾರ್ನೊಂದಿಗೆ ಮಾತುಕತೆ ನಡೆಸುವಂತೆ ಉತ್ತರಪ್ರದೇಶದ ಅಧಿಕಾರಿಗಳಿಗೆ ಆದಿತ್ಯನಾಥ್ ಅವರು ಸೂಚಿಸಿದ್ದಾರೆ’’
ಈ ವರ್ಷ ಕನ್ವಾರ್ ಯಾತ್ರೆ ನಿಯಂತ್ರಿಸಲು ವಿಸ್ತೃತ ಮಾರ್ಗಸೂಚಿ ರೂಪಿಸುವಂತೆ ಗೃಹ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದೆ ಎಂದು ಸರಕಾರದ ವಕ್ತಾರರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Next Story