ಹಿಮಾಚಲ ಪ್ರದೇಶ: ಸೇತುವೆಗೆ ಅಪ್ಪಳಿಸಿದ ಬೃಹತ್ ಬಂಡೆ; 9 ಪ್ರವಾಸಿಗರು ಸಾವು, ಹಲವರಿಗೆ ಗಾಯ
ಶಿಮ್ಲಾ, ಜು. 25: ಹಿಮಾಚಲಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ರವಿವಾರ ಸಂಭವಿಸಿದ ಭೂಕುಸಿತದ ಪರಿಣಾಮ ಬೆಟ್ಟವೊಂದರಿಂದ ಉರುಳಿದ ಬೃಹತ್ ಬಂಡೆ ಸೇತುವೆಗೆ ಹಾಗೂ ಅದರ ಮೇಲಿದ್ದ ವಾಹನಕ್ಕೆ ಅಪ್ಪಳಿಸಿದ ಪರಿಣಾಮ ಕನಿಷ್ಠ 9 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಬೆಟ್ಟದಿಂದ ಉರುಳಿದ ಬೃಹತ್ ಬಂಡೆಗಲ್ಲು ಅಪ್ಪಳಿಸಿದ ಬಳಿಕ ಸೇತುವೆಯ ಭಾಗವೊಂದು ಮುರಿದು ನದಿಗೆ ಬೀಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ. ಬಂಡೆ ಅಪ್ಪಳಿಸಿದ ಸಂದರ್ಭ ವಾಹನದಲ್ಲಿದ್ದ ಎಲ್ಲ 11 ಮಂದಿ ಪ್ರವಾಸಿಗರು ಎಂದು ಕಿನ್ನೌರ್ ಪೊಲೀಸ್ ಅಧೀಕ್ಷಕ ಸಾಜು ರಾಮ್ ರಾಣಾ ಹೇಳಿದ್ದಾರೆ.
#WATCH | Himachal Pradesh: Boulders roll downhill due to landslide in Kinnaur district resulting in bridge collapse; vehicles damaged pic.twitter.com/AfBvRgSxn0
— ANI (@ANI) July 25, 2021
Next Story