ಅಫ್ಘಾನ್ ಬಿಕ್ಕಟ್ಟು: ವಿದೇಶ ಪ್ರವಾಸ ಮೊಟಕುಗೊಳಿಸಿದ ವಿದೇಶಾಂಗ ಸಚಿವ ಜೈಶಂಕರ್
ನ್ಯೂಯಾರ್ಕ್: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಶುಕ್ರವಾರ ಭಾರತಕ್ಕೆ ಹಿಂತಿರುಗಲಿದ್ದು, ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಮೆಕ್ಸಿಕೋ, ಪನಾಮ ಹಾಗೂ ಗಯಾನಗಳಿಗೆ ಪ್ರಯಾಣಿಸುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಅಫ್ಘಾನ್ ರಾಜಧಾನಿಯನ್ನು ರವಿವಾರ ತಾಲಿಬಾನ್ ವಶಪಡಿಸಿಕೊಂಡ ನಂತರ ಭಾರತವು ತನ್ನ ರಾಯಭಾರಿ ರುದ್ರೇಂದ್ರ ಟಂಡನ್ ಹಾಗೂ ಸಿಬ್ಬಂದಿಯನ್ನು ಕಾಬೂಲ್ನ ರಾಯಭಾರ ಕಚೇರಿಯಿಂದ ಮಿಲಿಟರಿ ಸಾರಿಗೆ ವಿಮಾನದಲ್ಲಿ ವಾಪಸ್ ಕರೆಸಿಕೊಂಡಿತ್ತು.
ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಗಮನಿಸಿದರೆ ಜೈಶಂಕರ್ ಬೇಗನೆ ಭಾರತಕ್ಕೆ ಮರಳುತ್ತಾರೆ ಹಾಗೂ ಮೆಕ್ಸಿಕೋ, ಪನಾಮ ಮತ್ತು ಗಯಾನಾಗಳಿಗೆ ಪ್ರಯಾಣಿಸುವುದಿಲ್ಲ ಎಂದು ಮೂಲಗಳು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ತಿಳಿಸಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮೂರು ದೇಶಗಳಿಗೆ ಸಚಿವರ ಭೇಟಿಯನ್ನು ಅಧಿಕೃತವಾಗಿ ಘೋಷಿಸಿಲ್ಲ
Next Story