"ಕಾಲವೇ ಎಲ್ಲವನ್ನೂ ಉತ್ತರಿಸುತ್ತದೆ, ಪ್ರತಿಷ್ಠಾನದಲ್ಲಿರುವ ಪ್ರತಿ ರೂಪಾಯಿಯೂ ಅಮೂಲ್ಯವಾದ ಜೀವ ಉಳಿಸಲು ಕಾಯುತ್ತಿದೆ"
ಐಟಿ ದಾಳಿಯ ಕುರಿತು ಮೌನ ಮುರಿದ ನಟ ಸೋನು ಸೂದ್
ಹೊಸದಿಲ್ಲಿ: ಮುಂಬೈ, ಲಕ್ನೊ, ಕಾನ್ಪುರ, ಜೈಪುರ, ದಿಲ್ಲಿ ಹಾಗೂ ಗುರ್ಗಾಂವ್ನಲ್ಲಿನ ತನ್ನ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು 'ಸಮೀಕ್ಷೆ' ಮಾಡಿದ ನಂತರ ನಟ ಸೋನು ಸೂದ್ ಮೌನವನ್ನು ಮುರಿದರು.
"ತನ್ನ ಕಥೆಯನ್ನು ಕಾಲವೇ ಹೇಳುತ್ತದೆ . ಹೃದಯಪೂರ್ವಕವಾಗಿ ಹಾಗೂ ಶಕ್ತಿಯಿಂದ ಭಾರತದ ಜನರ ಸೇವೆಗೆ ತನ್ನನ್ನು ತಾನು ಅರ್ಪಿಸಿಕೊಂಡಿದ್ದೇನೆ. ತನ್ನ ಪ್ರತಿಷ್ಠಾನದ ಮೂಲಕ ಜನರಿಗೆ ಸಹಾಯ ಮಾಡುವುದನ್ನು ಮುಂದುವರಿಸುತ್ತೇನೆ'' ಎಂದು ಸೋನು ಸೂದ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಆದಾಯ ತೆರಿಗೆ ಇಲಾಖೆಯು ಸೋನು ಸೂದ್ ಅವರ ಮುಂಬೈ, ಲಕ್ನೋ, ಕಾನ್ಪುರ, ಜೈಪುರ, ದಿಲ್ಲಿ ಹಾಗೂ ಗುರ್ಗಾಂವ್ ನಲ್ಲಿನ ಆಸ್ತಿಗಳನ್ನು ಸಮೀಕ್ಷೆ ನಡೆಸಿತು. ಈ ಕುರಿತು ನಟ ಇಂದು (ಸೆಪ್ಟೆಂಬರ್ 20) ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸೂದ್ ತನ್ನ ಹೇಳಿಕೆಯಲ್ಲಿ, "ನೀವು ಯಾವಾಗಲೂ ನಿಮ್ಮ ಕತೆಯನ್ನು ಹೇಳಬೇಕಾಗಿಲ್ಲ. ಸಮಯ ಬರುತ್ತದೆ. ನಾನು ನನ್ನ ಸಂಪೂರ್ಣ ಶಕ್ತಿ ಹಾಗೂ ಹೃದಯದಿಂದ ಭಾರತದ ಜನರ ಸೇವೆಗೆ ಪ್ರತಿಜ್ಞೆ ಮಾಡಿದ್ದೇನೆ. ನನ್ನ ಪ್ರತಿಷ್ಠಾನದಲ್ಲಿರುವ ಪ್ರತಿ ರೂಪಾಯಿ ಅಮೂಲ್ಯವಾದ ಜೀವವನ್ನು ಉಳಿಸಲು ಹಾಗೂ ಅಗತ್ಯವಿರುವವರನ್ನು ತಲುಪಲು ಅದರ ಸರದಿಗಾಗಿ ಕಾಯುತ್ತಿದೆ " ಎಂದರು.