ಉನ್ನತ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ʼಟ್ವಿಟರ್ ಬಯೋʼದಿಂದ ಬಿಜೆಪಿ ಹೆಸರು ತೆರವುಗೊಳಿಸಿದ ಸುಬ್ರಮಣಿಯನ್ ಸ್ವಾಮಿ
"ರಾಷ್ಟ್ರೀಯ ಸಮಿತಿಯಲ್ಲಿ ನಾನು ಇದ್ದೆ ಎನ್ನುವುದೇ ತಿಳಿದಿರಲಿಲ್ಲ" ಎಂದ ವರಣ್ ಗಾಂಧಿ !
ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಾಯಕತ್ವದಿಂದ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ, ಇತ್ತೀಚೆಗೆ ರೈತರ ಪರವಾಗಿ ಹೇಳಿಕೆ ನೀಡಿದ್ದ ವರುಣ್ ಗಾಂಧಿ, ಮೇನಕಾ ಗಾಂಧಿ ಸೇರಿದಂತೆ ಹಲವರನ್ನು ಕೆಳಗಿಸಲಾಗಿತ್ತು. ಈ ನಿರ್ಧಾರ ವಿವಾದಕ್ಕೆ ಗ್ರಾಸವಾಗಿತ್ತು. ಇದೀಗ ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ತಮ್ಮ ಟ್ವಿಟರ್ ಬಯೋದಲ್ಲಿ ಬರೆದಿದ್ದ ಬಿಜೆಪಿ ಹೆಸರನ್ನು ಅಳಿಸಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿದ ಸಂಸದ ವರುಣ್ ಗಾಂಧಿ, "ನಾನು ಇದುವರೆಗೂ ಒಂದೇ ಒಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿಲ್ಲ. ಐದು ವರ್ಷಗಳಿಂದ ನಾನು ಅದರಲ್ಲಿ ಇದ್ದೆ ಎನ್ನುವುದೇ ನನಗೆ ತಿಳಿದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಪ್ರಕಟಿಸಿದ 80 ಮಂದಿ ರಾಷ್ಟ್ರೀಯ ಕಾರ್ಯಕಾರಿಣಿ ಕಮಿಟಿ ಸದಸ್ಯರಲ್ಲಿ ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಸ್ಥಾನ ಪಡೆದಿದ್ದರೂ, ಹಲವು ಹಿರಿಯ ನಾಯಕರ ಹೆಸರನ್ನು ಕೈ ಬಿಡಲಾಗಿತ್ತು.
ಸುಬ್ರಮಣಿಯನ್ ಸ್ವಾಮಿಯವರ ಹಿಂದಿನ ಟ್ವಿಟರ್ ಬಯೋ
ಸುಬ್ರಮಣಿಯನ್ ಸ್ವಾಮಿಯವರ ಈಗಿನ ಟ್ವಿಟರ್ ಬಯೋ
So BJP gets touch with critics. #VarunGandhi and mother Maneka plus #subramanianswamy dropped from national executive.
— Saba Naqvi (@_sabanaqvi) October 7, 2021
High Command supreme
The removal comes at a time when Varun Gandhi has been quite vocal regarding the Lakhimpur Kheri incident.BJP MP has been speaking in support of farmers during their ongoing stir against the three agri laws. #Yogi_Shielding_Terrorists pic.twitter.com/v1v0kRowpo
— Simarpreet Singh (@preet_simar20) October 8, 2021
BJP: No one is allowed to speak against high command in other parties. So undemocratic
— Sir काज़म (@SirKazamJeevi) October 7, 2021
Varun Gandhi asks for justice for farmers killings. BJP high command fires him from national executive
Masterstroke