‘ನಾಯಿ ಸತ್ತಾಗ ಸಂತಾಪ ಸೂಚಿಸುವವರು ರೈತರ ಸಾವಿಗೆ ಯಾರೂ ದುಃಖಿಸಲಿಲ್ಲ’:ಕೇಂದ್ರದ ವಿರುದ್ದ ಮೇಘಾಲಯ ರಾಜ್ಯಪಾಲರ ಆಕ್ರೋಶ
ಜೈಪುರ: ರೈತರ ಸಮಸ್ಯೆ ಹಾಗೂ ಸೆಂಟ್ರಲ್ ವಿಸ್ಟಾ ಯೋಜನೆಗೆ ಸಂಬಂಧಿಸಿದಂತೆ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ರವಿವಾರ ಕೇಂದ್ರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೈಪುರದಲ್ಲಿ ಸರಣಿ ಟೀಕೆಗಳನ್ನು ಮಾಡಿರುವ ಮಲಿಕ್, ದಿಲ್ಲಿ ಯ ನಾಯಕರು ನಾಯಿ ಸತ್ತಾಗಲೂ ಸಂತಾಪ ಸೂಚಿಸುತ್ತಾರೆ ಆದರೆ ಕೇಂದ್ರದ ಮೂರು ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧದ ಆಂದೋಲನದ ಸಂದರ್ಭದಲ್ಲಿ "600" ರೈತರ ಸಾವಿನ ಬಗ್ಗೆ ಅವರಲ್ಲಿ ಯಾರೂ ದುಃಖ ವ್ಯಕ್ತಪಡಿಸಲಿಲ್ಲ ಎಂದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಉಲ್ಲೇಖಿಸಿದ ಅವರು, ಸಿಖ್ ಸಮುದಾಯವನ್ನು ದ್ವೇಷಿಸಬೇಡಿ ಎಂದು ಸರಕಾರವನ್ನು ಕೇಳಿದರು.
ಸರಕಾರದಲ್ಲಿ ರೈತರ ಪರ ಇರುವವರಿದ್ದಾರೆ. ಆದರೆ ಒಬ್ಬಿಬ್ಬರು ದುರಹಂಕಾರಿಗಳಾಗಿದ್ದಾರೆ ಎಂದರು.
#WATCH | 600 people have died in this farm movement... Even when an animal dies, Delhi 'netas' express condolences, but they could not pass the proposal of 600 farmers in Lok Sabha..: Meghalaya Governor Satya Pal Malik, in Jaipur pic.twitter.com/Mz8RiaCScC
— ANI (@ANI) November 7, 2021