ಸ್ವಾತಂತ್ರ್ಯ ಚಳುವಳಿ ಕುರಿತು ವಿವಾದಾತ್ಮಕ ಹೇಳಿಕೆ: ಕಂಗನಾ ವಿರುದ್ಧ ದೂರು ದಾಖಲು
ಹೊಸದಿಲ್ಲಿ: ರಾಷ್ಟ್ರೀಯ ಮಾಧ್ಯಮ ನೆಟ್ವರ್ಕ್ನ ವಾರ್ಷಿಕ ಶೃಂಗಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ನೀಡಿರುವ ದೇಶದ್ರೋಹದ ಹೇಳಿಕೆ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷೆ ಪ್ರೀತಿ ಮೆನನ್ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ಬ್ರಿಟಿಷರ ಆಳ್ವಿಕೆಯ ವಿಸ್ತರಣೆಯಾಗಿದೆ ಹಾಗೂ ಭಾರತವು 2014 ರಲ್ಲಿ ತನ್ನ 'ನೈಜ ಸ್ವಾತಂತ್ರ್ಯ'ವನ್ನು ಪಡೆದುಕೊಂಡಿತು. 1947 ರಲ್ಲಿ ಭಾರತ ಪಡೆದುಕೊಂಡಿರುವುದು ಭಿಕ್ಷೆ ಆಗಿತ್ತು ಎಂದು ಸ್ವಾತಂತ್ರ್ಯ ಚಳವಳಿಯ ಕುರಿತು ಬಾಲಿವುಡ್ ನಟಿಯ ಹೇಳಿಕೆ ವಿವಾದವನ್ನುಂಟು ಮಾಡಿದೆ. ರಣಾವತ್ ಹೇಳಿಕೆ 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ.
TimesNow ನಲ್ಲಿ ಕಂಗನಾ ರಣಾವತ್ ಅವರ ದೇಶದ್ರೋಹದ ಹಾಗೂ ಪ್ರಚೋದಿತ ಹೇಳಿಕೆಗಳಿಗಾಗಿ 504, 505 ಹಾಗೂ 124A ಅಡಿಯಲ್ಲಿ ಕ್ರಮಕ್ಕಾಗಿ ವಿನಂತಿಸುವ ಅರ್ಜಿಯನ್ನು ಮುಂಬೈ ಪೊಲೀಸರಿಗೆ ಸಲ್ಲಿಸಲಾಗಿದೆ. ಕೆಲವು ಕ್ರಮಗಳನ್ನು ನೋಡಲು ಆಶಿಸುತ್ತೇವೆ ಎಂದು ಪ್ರೀತಿ ಶರ್ಮಾ ಮೆನನ್ ಗುರುವಾರ ಟ್ವೀಟಿಸಿದ್ದಾರೆ.