ವರ್ಗ ಹೋರಾಟದ ಇತಿಹಾಸದಲ್ಲಿ ಮಹಾನ್ ಅಧ್ಯಾಯ: ರೈತರ ಪ್ರತಿಭಟನೆ ಕುರಿತು ಕೇರಳ ಸಿಎಂ
ತಿರುವನಂತಪುರ,ನ.19: ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಳ್ಳಬೇಕು ಎಂಬ ಬೇಡಿಕೆಗೆ ಸರಕಾರವು ಮಣಿಯುವಂತೆ ಮಾಡಿರುವ ರೈತರು ವರ್ಗ ಹೋರಾಟಗಳ ಇತಿಹಾಸದಲ್ಲಿ ಉಜ್ವಲ ಅಧ್ಯಾಯವೊಂದನ್ನು ಬರೆದಿದ್ದಾರೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಶುಕ್ರವಾರ ಇಲ್ಲಿ ಹೇಳಿದರು. ‘ಹಲವಾರು ಸವಾಲುಗಳನ್ನು ಎದುರಿಸಿ ದಣಿವರಿಯದ ಹೋರಾಟ ನಡೆಸಿದ ರೈತರಿಗೆ ಅಭಿನಂದನೆಗಳು ’ಎಂದು ಅವರು ಟ್ವೀಟಿಸಿದ್ದಾರೆ.
Next Story