ಕಾಂಗ್ರೆಸ್ ಪಕ್ಷವು ಬಿಜೆಪಿಗೆ ಭರವಸೆಯಾಗಿದೆಯೇ ಹೊರತು ಗೋವಾದ ಜನರಿಗಲ್ಲ: ಚಿದಂಬರಂಗೆ ಕೇಜ್ರಿವಾಲ್ ತಿರುಗೇಟು
ಹೊಸದಿಲ್ಲಿ: ಕಾಂಗ್ರೆಸ್ ಭಾರತೀಯ ಜನತಾ ಪಕ್ಷಕ್ಕೆ ಭರವಸೆಯಾಗಿದೆಯೇ ಹೊರತು ಗೋವಾ ಜನರ ಭರವಸೆಯಾಗಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಟ್ವೀಟಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿಕೆಗೆ ತಿರುಗೇಟು ನೀಡಿದರು.
"ಸರ್, ಅಳುವುದನ್ನು ನಿಲ್ಲಿಸಿ, ಯಾರಲ್ಲಿ ಭರವಸೆ ಕಾಣುತ್ತದೆಯೋ ಅವರಿಗೆ ಗೋವಾ ಜನತೆ ಮತ ಹಾಕುತ್ತಾರೆ. ಕಾಂಗ್ರೆಸ್, ಬಿಜೆಪಿ ಪಕ್ಷಕ್ಕೆ ಭರವಸೆಯಾಗಿದೆ. ಕಾಂಗ್ರೆಸ್ ನ 17 ಶಾಸಕರಲ್ಲಿ 15 ಮಂದಿ ಬಿಜೆಪಿಯಲ್ಲಿದ್ದಾರೆ. ಕಾಂಗ್ರೆಸ್ ಗೆ ನೀಡುವ ಪ್ರತಿ ಮತವೂ ಸುರಕ್ಷಿತವಾಗಿ ಬಿಜೆಪಿಗೆ ತಲುಪುತ್ತದೆ. ಬಿಜೆಪಿಗೆ ಮತ ನೀಡಿದರೆ ಕಾಂಗ್ರೆಸ್ ಗೆ ಸೇರುತ್ತದೆ'' ಎಂದು ಕೇಜ್ರಿವಾಲ್ ಸೋಮವಾರ ಟ್ವೀಟಿಸಿದ್ದಾರೆ.
ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಸೋಮವಾರ ಮಾಡಿದ ಟ್ವಿಟ್ ನಲ್ಲಿ, ಆಪ್ ಮತ್ತು ತೃಣಮೂಲ ಕಾಂಗ್ರೆಸ್ ಕೇವಲ ಬಿಜೆಪಿ ವಿರೋಧಿ ಮತಗಳ ವಿಭಜನೆಯಲ್ಲಿ ಮಾತ್ರ ಸಹಾಯ ಮಾಡುತ್ತಿವೆ. ಹೀಗಾಗಿ ಈ ಎರಡು ಪಕ್ಷಗಳು ಬಿಜೆಪಿ ಪಕ್ಷಕ್ಕೆ ಸಹಾಯ ಮಾಡುತ್ತಿವೆ ಎಂದು ಹೇಳಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನ ಹಿರಿಯ ಚುನಾವಣಾ ವೀಕ್ಷಕರಾಗಿರುವ ಚಿದಂಬರಂ, ಆಡಳಿತ ಬದಲಾವಣೆಗೆ ಮತ ನೀಡಿ ಕಾಂಗ್ರೆಸ್ನ್ನು ಆಯ್ಕೆ ಮಾಡುವಂತೆ ಗೋವಾದ ಮತದಾರರಲ್ಲಿ ಮನವಿ ಮಾಡಿದ್ದಾರೆ.
सर, रोना बंद कीजिए- “हाय रे, मर गए रे, हमारे वोट काट दिए रे”
— Arvind Kejriwal (@ArvindKejriwal) January 17, 2022
Goans will vote where they see hope
Cong is hope for BJP, not Goans.15 of ur 17 MLAs switched to BJP
Cong guarantee- every vote to Cong will be safely delivered to BJP. To vote BJP, route thro Cong for safe delivery https://t.co/tJ0cswgi74