ಭಾರತ ʼಚೀನಾ-ನಿರ್ಭರ್' ಆಗಿದೆಯೇ?: ರಾಮಾನುಜಾಚಾರ್ಯ ಪ್ರತಿಮೆಯ ಕುರಿತು ಕೇಂದ್ರವನ್ನು ಕೆಣಕಿದ ರಾಹುಲ್ ಗಾಂಧಿ
ಹೊಸದಿಲ್ಲಿ: ಹೈದರಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉದ್ಘಾಟಿಸಿರುವ ಸಮಾನತೆಯ ಪ್ರತಿಮೆಯನ್ನು ಚೀನಾದಲ್ಲಿ ನಿರ್ಮಿಸಲಾಗಿದೆ ಎಂದು ಬುಧವಾರ ಟ್ವೀಟಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರಕಾರದ ಆತ್ಮನಿರ್ಭರ್ ನೀತಿಯನ್ನು ಟೀಕಿಸಿದ್ದಾರೆ. 'ನವ ಭಾರತವು ಚೀನಾ-ನಿರ್ಭರ್' ಆಗಿದೆಯೇ ಎಂದು ಕೇಳಿದ್ದಾರೆ.
"ಸಮಾನತೆಯ ಪ್ರತಿಮೆ ಚೀನಾದಲ್ಲಿ ತಯಾರಿಸಲ್ಪಟ್ಟಿದೆ. 'ಹೊಸ ಭಾರತ' ಚೀನಾ-ನಿರ್ಭರ್" ಆಗಿದೆಯೇ ಎಂದು ರಾಹುಲ್ ಇಂದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯೋಜನೆಯ ವೆಬ್ಸೈಟ್ ಪ್ರಕಾರ, ಹೈದರಾಬಾದ್ನಲ್ಲಿರುವ 216 ಅಡಿ ರಾಮಾನುಜಾಚಾರ್ಯರ ಪ್ರತಿಮೆಯನ್ನು ಚೀನಾದ ಕಾರ್ಪೊರೇಷನ್ ತಯಾರಿಸಿದೆ. ರೂ. 135 ಕೋಟಿ ವೆಚ್ಚದ ಈ ಪ್ರತಿಮೆಯ ಗುತ್ತಿಗೆಯನ್ನು ಚೀನಾದ ಏರೋಸನ್ ಕಾರ್ಪೊರೇಷನ್ಗೆ 2015ರಲ್ಲಿ ನೀಡಲಾಗಿತ್ತು.
ಈ ಪ್ರತಿಮೆಯನ್ನು ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ಇದು ಹೈದರಾಬಾದ್ನ ಹೊರವಲಯದಲ್ಲಿರುವ 45 ಎಕರೆ ಸಂಕೀರ್ಣದಲ್ಲಿ ನೆಲೆಗೊಂಡಿದೆ. Rs1,000-ಕೋಟಿ ಯೋಜನೆಗೆ ಸಂಪೂರ್ಣವಾಗಿ ಜಾಗತಿಕವಾಗಿ ಭಕ್ತರ ದೇಣಿಗೆಯಿಂದ ಹಣವನ್ನು ಪಡೆಯಲಾಗಿದೆ.
Statue of Equality is Made in China.
— Rahul Gandhi (@RahulGandhi) February 9, 2022
‘New India’ is China-nirbhar?