ಪ್ರಧಾನಿ ಮೋದಿ ನಿರುದ್ಯೋಗದ ಬಗ್ಗೆ ಮಾತನಾಡಲಿ: ಪ್ರಿಯಾಂಕಾ ಗಾಂಧಿ
ಲಕ್ನೊ: ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷವು ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿವೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪಕ್ಕೆ ಸೋಮವಾರ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, "ಇದು ನಿಜವಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತು. ಚುನಾವಣೆಯ ಕಾರಣದಿಂದ ಅವರು ಇಷ್ಟೆಲ್ಲ ಹೇಳುತ್ತಿದ್ದಾರೆ. ಹಲವಾರು ಸರಕಾರಿ ಹುದ್ದೆಗಳು ಖಾಲಿ ಬಿದ್ದಿರುವಾಗ ಉತ್ತರಪ್ರದೇಶದಲ್ಲಿ ಇಷ್ಟೊಂದು ನಿರುದ್ಯೋಗ ಏಕೆ ? ಮೋದಿ ಅವರು ಸಂಬಂಧಿತ ವಿಷಯಗಳ ಬಗ್ಗೆ ಮಾತ್ರ ಮಾತನಾಡಬೇಕು ಎಂದರು.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಲಕ್ನೋದ ಚಿನ್ಹಾಟ್ ಪ್ರದೇಶದಲ್ಲಿ ಪ್ರಚಾರ ನಡೆಸಿದರು.
ರಾಜ್ಯದಲ್ಲಿ ನಾಲ್ಕನೇ ಹಂತದ ಚುನಾವಣೆಯು ಫೆಬ್ರವರಿ 23ರಂದು ನಡೆಯಲಿದೆ.
#WATCH Congress General Secretary Priyanka Gandhi Vadra campaigns in Chinhat area of Lucknow for ongoing Uttar Pradesh Assembly elections
— ANI UP/Uttarakhand (@ANINewsUP) February 21, 2022
The fourth phase of voting in Assembly elections will be held on 23rd February pic.twitter.com/kVcieRqQRJ