ದಿವಂಗತ ಪತ್ರಕರ್ತ ಕಮಲ್ ಖಾನ್ರನ್ನು ನೆನಪಿಸುತ್ತಾ ಚುನಾವಣಾ ಫಲಿತಾಂಶ ಕಾರ್ಯಕ್ರಮ ಆರಂಭಿಸಿದ ರವೀಶ್ ಕುಮಾರ್
Photo; Twitter/sardesairajdeep
ಹೊಸದಿಲ್ಲಿ: ಗುರುವಾರ ಬೆಳಗ್ಗೆ, ಎನ್ಡಿಟಿವಿಯ ರವೀಶ್ ಕುಮಾರ್ ಅವರು ತಮ್ಮ ಸಹೋದ್ಯೋಗಿ ಪತ್ರಕರ್ತ ದಿವಂಗತ ಕಮಲ್ ಖಾನ್ ಅವರ ನೆನಪುಗಳೊಂದಿಗೆ ಚುನಾವಣಾ ಫಲಿತಾಂಶದ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ.
"ನಾವು ಕಮಲ್ ಖಾನ್ ಅವರನ್ನು ಕಳೆದುಕೊಂಡಾಗ ಉತ್ತರ ಪ್ರದೇಶ ಚುನಾವಣೆಯ ಪ್ರಚಾರ ಪ್ರಾರಂಭವಾಯಿತು. ಅವರು ಇಲ್ಲಿದ್ದರೆ, ಉತ್ತರ ಪ್ರದೇಶದ ರಾಜಕೀಯವನ್ನು ಸೂಕ್ಷ್ಮ ದೃಷ್ಟಿಯಿಂದ ನೋಡುತ್ತಿದ್ದರು ಮತ್ತು ಹೆಚ್ಚು ನಿರರ್ಗಳ ಭಾಷೆಯಲ್ಲಿ ವ್ಯಕ್ತಪಡಿಸುತ್ತಿದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ, ಆದರೆ ನಾವು ಅವರನ್ನು ನೆನಪಿಸಿಕೊಳ್ಳುತ್ತಾ ಇಂದಿನ ಕವರೇಜ್ ಅನ್ನು ಪ್ರಾರಂಭಿಸುತ್ತೇವೆ. ಕಮಲ್ ಅವರಂತಹ ಅನುಭವಿ ಪತ್ರಕರ್ತರನ್ನು ಕಳೆದುಕೊಂಡ ನಂತರ, ಈ ಚುನಾವಣಾ ಕವರೇಜ್ ಕೊರತೆಯನ್ನು ಅನುಭವಿಸಬಹುದು, ಆದರೆ ನಮ್ಮ ಇತರ ವರದಿಗಾರರು ನಮಗೆ ವ್ಯತ್ಯಾಸವನ್ನು ಅನುಭವಿಸಲು ಬಿಡಲಿಲ್ಲ, ಅವರು ತುಂಬಾ ಶ್ರಮಿಸಿದ್ದಾರೆ.” ಎಂದು ಹೇಳಿದ್ದಾರೆ
Remembering NDTV's Kamal Khan: this is how Ravish Kumar (@ravishndtv) started today's election coverage on NDTV India pic.twitter.com/Ln3IE7YkoV
— NDTV (@ndtv) March 10, 2022